ಮೋದಿ ದೇಶಕ್ಕೆ ನಾನೇ ಗ್ಯಾರಂಟಿ ಎಂಬ ಭ್ರಮೆಯಲ್ಲಿದ್ದಾರೆ: ಸತೀಶ್ ಜಾರಕಿಹೊಳಿ
Google News | Join WhatsApp | Join Telegram | Live |
Panchayat Swaraj Samachar News Desk.
ಬೆಳಗಾವಿ: ಬಿಜೆಪಿ ಅಭ್ಯರ್ಥಿಗಳು ಹೊರಗಿನಿಂದ ಬರಲಿ ಅಥವಾ ಒಳಗಿನಿಂದ ಬರಲಿ ನಮಗೆ ಆ ಪ್ರಶ್ನೆ ಇಲ್ಲ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವದೇ ನಮ್ಮ ಗುರಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ .
ನಗರದಲ್ಲಿ ಇಂದು ಡಿಜಿಟಲ್ ಮಾಧ್ಯಮದೊಂದಿಗೆ ಮಾತನಾಡಿ ಅ ವರು ಕಾರ್ಯಕರ್ತರ ಪಡೆ ಈ ಚುನಾವಣೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ . ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಬಿಜೆಪಿಯು ದೇಶಕ್ಕೆ ಮೋದಿನೇ ಗ್ಯಾರಂಟಿ ಎಂಬ ಭ್ರಮೆಯಲ್ಲಿ ಇದೆ. ಆದರೆ ಸುಳ್ಳು ಗ್ಯಾರಂಟಿಗಳಿಂದ ಏನು ನಡೆಯಲಾರದು, ನಾವು ನುಡಿದಂತೆ ನಡೆದಿದ್ದೇವೆ ನಮ್ಮ ಗ್ಯಾರಂಟಿಗಳು ನೇರವಾಗಿ ಜನರಿಗೆ ತಲುಪುತ್ತಿವೆ ಎಂದರು.
ಮೋದಿ ಗ್ಯಾರಂಟಿ ಬಗ್ಗೆ ಕಟುವಾಗಿ ಟೀಕಿಸಿದ ಅವರು ಇಲೆಟ್ರಲ್ ಬಾಂಡ್ ಕುರಿತು ಪ್ರತಿಕ್ರಿಯೆ ನೀಡಿ ಮಾಧ್ಯಮಗಳು ಅದನ್ನು ಪ್ರಚಾರ ಮಾಡಬೇಕಾಗಿದೆ ನಾವು ಈಗಾಗಲೇ ಹಲವು ರೀತಿ ಚರ್ಚೆ ಮುಖಾಂತರ ಜನರಿಗೆ ತಿಳಿಸುತ್ತಾ ಇದ್ದೇವೆ ಸುದ್ದಿ ಮಾಧ್ಯಮಗಳು ಇದನ್ನು ಪ್ರಸಾರ ಮಾಡಬೇಕಾಗಿದೆ ಅಷ್ಟೇ ಮತಯಂತ್ರದಲ್ಲಿ ರಾಜನ ಪ್ರಾಣ ಅಡಿಗಿದೆ ! ಹಾಗಾದ್ರೆ ಯಾವ ರೀತಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಪ್ರಶ್ನೆಗೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಜನ ನಮ್ಮೊಂದಿಗೆ ಇರುವರಿಗೂ ನಾವು ಪ್ರಜಾಪ್ರಭುತ್ವವನ್ನು ಗೆಲ್ಲಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Google News | Join Facebook | Live | 24/7 Help Desk |