ಇದು ಬಡವರ ಮತ್ತು ಉಳ್ಳವರ ನಡುವಿನ ಚುನಾವಣೆ

Mar 28, 2024 - 18:17
 39
Google  News Join WhatsApp Join Telegram Live

ಇದು ಬಡವರ ಮತ್ತು ಉಳ್ಳವರ ನಡುವಿನ ಚುನಾವಣೆ

Panchayat Swaraj Samachar News Desk.

ಬೆಳಗಾವಿ: ಇದು ಕಾಂಗ್ರೆಸ್- ಬಿಜೆಪಿ ನಡುವಿನ ಚುನಾವಣೆಯಲ್ಲ. ಬಡವರು ಮತ್ತು ಅದಾನಿ-ಅಂಬಾನಿ ವಿರುದ್ಧದ ಚುನಾವಣೆ. ಯುವಕರ ಕೈಗೆ ಉದ್ಯೋಗ ಒದಗಿಸುವ ಚುನಾವಣೆ ಎಂದು ಲೋಕಸಭಾ ಉತ್ತರ ಕನ್ನಡ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

ಕಾರವಾರದಲ್ಲಿ ನೆಡೆದ ಪೂರ್ವಭಾವಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು ರೈತರಿಗೆ ನ್ಯಾಯ ನೀಡುವ, ಮಹಿಳೆಯರಿಗೆ ಮಾನ- ಸಮ್ಮಾನ ನೀಡುವ ಚುನಾವಣೆ ಇದಾಗಿದ್ದು 30 ವರ್ಷಗಳಿಂದ ದೆಹಲಿಯಲ್ಲಿ ಬಿಜೆಪಿ ಸಂಸದರು ಏನನ್ನೂ ಮಾತನಾಡಿಲ್ಲ. ನೀವೆಲ್ಲ ಆಶೀರ್ವಾದ ಮಾಡಿದರೆ ಕ್ಷೇತ್ರದ ಹೆಸರನ್ನ ದೆಹಲಿಯವರೆಗೂ ಒಯ್ಯುತ್ತೇನೆ ಎಂದರು.

 ಜಿಲ್ಲೆಯ ಸಮಸ್ಯೆಗಳನ್ನ ಪರಿಹರಿಸಲು ಎಲ್ಲರೊಂದಿಗೆ ಚರ್ಚಿಸಿ ಶ್ರಮಿಸುತ್ತೇನೆ. ಖಾನಾಪುರದಿಂದ ಬಂದಿದ್ದರೂ ನಿಮ್ಮನೆ ಮಗಳೆಂದು ಆಶೀರ್ವದಿಸಿ ಎಂದು ಡಾ.ಅಂಜಲಿ ನಿಂಬಾಳ್ಕರ್‌ ತಿಳಿಸಿದರು.

ಸಭೆಯಲ್ಲಿ ಸತೀಶ್ ಸಾಯಿಲ್, ಮಂಕಾಳ ವೈದ್ಯ, ಸಾಯಿ ಗಾಂವ್ಕರ್‌, ಸತೀಶ್‌ ನಾಯ್ಕ, ಸಮೀರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Google News Join Facebook Live 24/7 Help Desk

Tags: