ಸಮಾಜ ಸುಧಾರಕರನ್ನು ಮರೆತು ಬಿಟ್ಟಿತೆ ಬೆಳಗಾವಿ ಕಾಂಗ್ರೆಸ್?

Apr 11, 2024 - 13:54
 48
Google  News Join WhatsApp Join Telegram Live

ಸಮಾಜ ಸುಧಾರಕರನ್ನು ಮರೆತು ಬಿಟ್ಟಿತೆ ಬೆಳಗಾವಿ ಕಾಂಗ್ರೆಸ್?

Panchayat Swaraj Samachar News Desk.

ಬೆಳಗಾವಿ: ಸಮಾಜ ಸುಧಾರಣೆ ಮತ್ತು ದೇಶ ಸ್ವತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಕಸ್ತೂರಿಬಾ ಮೋಹನ್ ದಾಸ್ ಗಾಂಧಿ ಹಾಗೂ ಸತ್ಯಶೋಧಕ ಮಹಾತ್ಮ ಜ್ಯೋತಿಬಾಪುಲೆ ಅವರಿಗೆ ದೇಶ ಇಂದು ಅಭಿನಂಧನೆ ಸಲ್ಲಿಸುತ್ತಿದೆ. ಆದರೆ ಚುನಾವಣಾ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಈ ಮಹಾನ್ ನಾಯಕರನ್ನು ಮರೆತಂತೆ ಕಾಣುತ್ತಿದೆ.

ಅವರ ಆದರ್ಶ, ಅವರು ಸಮಾಜಕ್ಕಾಗಿ ನೀಡಿದಂತಹ ಅಮೋಘ ಕಾರ್ಯಗಳನ್ನು ಇಂದು ಇವತ್ತಿನ ರಾಜಕೀಯ ನಾಯಕರುಗಳು ಮರೆತಿದ್ದಾರೆ ? ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡುವ ಕಾಂಗ್ರೆಸ್ ಪಕ್ಷ ಇಂದು ಮಹಾಚೇತನರ ಜಯಂತಿಯನ್ನು ಮರೆತಿದೆ.

ಬೆಳಗಾವಿ ಪಕ್ಷದ ಕಾರ್ಯಾಲಯದಲ್ಲಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಅವಹಾರ್ದತೆಯೂ ಕೂಡ ತೋರಿಸಿಲ್ಲ. ಸಾಮಾಜಿಕ ನ್ಯಾಯ, ಎಲ್ಲರಿಗೂ ಸಮಬಾಳು ಸಮಪಾಲು ಆಧಾರದ ಮೇಲೆ ನಡೆಯುತ್ತಿರುವ ಪಕ್ಷಗಳೇ ಈ ರೀತಿ ಮಾಡಿದರೆ ಮುಂದಿನ ಯುವ ಪೀಳಿಗೆಗೆ ಈ ಮಹಾನ್ ಸಮಾಜ್ ಸುಧಾರಕರ ಪರಿಚಯವಾಗುವುದಾದರೂ ಹೇಗೆ

 ?

Google News Join Facebook Live 24/7 Help Desk

Tags: