ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಶಿವಕುಮಾರ್ ತಡರಾತ್ರಿ ಕಾರ್ಯಾಚರಣೆ

Apr 12, 2024 - 13:03
 47
Google  News Join WhatsApp Join Telegram Live

ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಶಿವಕುಮಾರ್ ತಡರಾತ್ರಿ ಕಾರ್ಯಾಚರಣೆ

Panchayat Swaraj Samachar News Desk.

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಖೆಡ್ಡಾ ತೋಡಿದ್ದಾರೆ. ಒಕ್ಕಲಿಗ ಅಸ್ತ್ರ ಹೂಡಿ, ದಳಪತಿಗಳ ಸಾಮ್ರಾಜ್ಯವನ್ನೇ ಶೇಕ್ ಮಾಡಿದ್ದ ಡಿಕೆ ಶಿವಕುಮಾರ್, ಗುರುವಾರ ತಡರಾತ್ರಿ ಆಪರೇಷನ್ ಹಸ್ತದ ಮೂಲಕ ಮತ್ತೆ ಶಾಕ್ ಕೊಟ್ಟಿದ್ದಾರೆ. ತಮ್ಮ ಡಿಕೆ ಸುರೇಶ್ ಗೆಲುವಿಗಾಗಿ ರಾತ್ರೋರಾತ್ರಿ ಆಪರೇಷನ್ ಮಾಡಿರುವ ಡಿಕೆ ಶಿವಕುಮಾರ್, 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಂಸದ ಡಿ.ಕೆ ಸುರೇಶ್ ಗೆಲುವಿಗೆ ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಡಿಕೆ ಶಿವಕುಮಾರ್ ಚನ್ನಪಟ್ಟಣದಲ್ಲೇ ಹೆಚ್‌ಡಿಕೆಗೆ ಶಾಕ್ ಕೊಟ್ಟಿದ್ದಾರೆ. ಅಕ್ಕೂರು ದೊಡ್ಡಿ ಶಿವಣ್ಣ ಸೇರಿ 300ಕ್ಕೂ ಹೆಚ್ಚು ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಖುದ್ದು ಡಿಕೆ ಅವರೇ ಕಾಂಗ್ರೆಸ್ ಧ್ವಜ ನೀಡಿ ದಳ ಮುಖಂಡರನ್ನು ಸ್ವಾಗತಿಸಿದ್ದಾರೆ. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇವರೆಲ್ಲಾರು ಪಕ್ಕಾ ಕುಮಾರಸ್ವಾಮಿ ಬೆಂಬಲಿಗರು. ಪ್ರತಿದಿನ ಸಾವಿರಾರು ಜನ ಕಾಂಗ್ರೆಸ್ ಸೇರ್ತಿದ್ದಾರೆ ಎಂದರು.

ಕುಮಾರಸ್ವಾಮಿ ಚನ್ನಪಟ್ಟಣದ ಕಾರ್ಯಕರ್ತರನ್ನು ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಮಂಡ್ಯದಲ್ಲೂ ಅವರು ಗೆಲ್ಲುವುದಿಲ್ಲ. ಅಲ್ಲದೇ, ಜೆಡಿಎಸ್ಗಾಗಿ ನಿಮ್ಮ ಟೈಮ್ ವೇಸ್ಟ್ ಮಾಡ್ಕೋಬೇಡಿ. ನಮ್ಮ ಜೊತೆಗೆ ಬನ್ನಿ, ನಿಮ್ಮ ಜೊತೆಗೆ ನಾನು ಇರುತ್ತೇನೆ ಎಂದು ದಳ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Google News Join Facebook Live 24/7 Help Desk

Tags: