ಪುಲ್ವಾಮ ದಾಳಿ ಮಾಡಿಸಿದ್ದು ಬಿಜೆಪಿ, ಸರ್ಜಿಕಲ್ ಸ್ಟ್ರೈಕ್ ನಾಟಕ: ಎಸ್.ಆರ್ ಶ್ರೀನಿವಾಸ್
Google News | Join WhatsApp | Join Telegram | Live |
Panchayat Swaraj Samachar News Desk.
ತುಮಕೂರು: ಪುಲ್ವಾಮಾ ದಾಳಿಯನ್ನು ಬೇರೆ ಯಾರೂ ಮಾಡಿಲ್ಲ, ಬಿಜೆಪಿಯವರೇ ಮಾಡಿಸಿದ್ದು. ಬಳಿಕ ಇವರೇ ಸರ್ಜಿಕಲ್ ಸ್ಟ್ರೈಕ್ ನಾಟಕ ಮಾಡಿದ್ದಾರೆ ಎಂದು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ರೋಡ್ ಶೋ ವೇಳೆ ಮಾತನಾಡಿದ ಅವರು, ಕಳೆದ ಬಾರಿ ಪುಲ್ವಾಮಾ ದಾಳಿ ಮಾಡಿ ಚುನಾವಣೆಯಲ್ಲಿ ಗೆದ್ದರು. ಈ ಬಾರಿ ರಾಮ ಮಂದಿರ ತೋರಿಸುತ್ತಿದ್ದಾರೆ. ಬರೀ ಹಿಂದೂ ಮುಸ್ಲಿಂ ಗಲಾಟೆ ಮಾಡೋದೆ ಇವರ ಕೆಲಸ. ಮೋದಿ ಬಂದು 10 ವರ್ಷ ಆಯ್ತು, ಒಬ್ಬ ಮುಸ್ಲಿಂ ವ್ಯಕ್ತಿಯನ್ನು ದೇಶದಿಂದ ಓಡಿಸಲು ಆಗಿಲ್ಲ ಎಂದಿದ್ದಾರೆ.
ತುಮಕೂರಿನ ಜನ ಸ್ವಾಭಿಮಾನ ಮಾರಾಟ ಮಾಡಿದ ಪ್ರಕರಣ ಇಲ್ಲ. ಈ ಬಾರಿಯೂ ಯಾರೂ ಸ್ವಾಭಿಮಾನ ಮಾರಿಕೊಳ್ಳಲ್ಲ ಎಂಬ ಭರವಸೆ ಇದೆ. ಬಿಜೆಪಿ ಸಂಸದರು ಯಾರೂ ಒಬ್ಬ ಮೋದಿ ಮುಂದೆ ಗಂಡಸಾಗಿ ನಿಂತಿಲ್ಲ. ಲೋಕಸಭೆಯಲ್ಲಿ ಸಮರ್ಥವಾಗಿ ಎದುರಿಸುವ ಮುದ್ದುಹನುಮೇಗೌಡರಿಗೆ ಮತ ಹಾಕಬೇಕು ಎಂದಿದ್ದಾರೆ.
Google News | Join Facebook | Live | 24/7 Help Desk |