ಜಾತ್ರಾ ನಿಮಿತ್ತವಾಗಿ ವಾಹನ ನಿಲುಗಡೆ ವ್ಯವಸ್ಥೆ ಪೂದ್ದಾರ ಲೇಔಟ್ ಸಾಯಿ ಮಂದಿರ ಪರಿಸರ ಹಾಗೂ ಶಾಹೂನಗರ ಪರಿಸರದಲ್ಲಿ ಬಸ್ ನಿಲ್ದಾಣ ಹಾಗೂ ವಿಶೇಷ ವಾಹನಗಳ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಮುಂಜಾಗ್ರತಾ ಕ್ರಮವಾಗಿ ಹಳೆ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಉಪ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ ಶಾಂತಿ ಸುವ್ಯವಸ್ಥೆಗೆ ಗ್ರಹ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಇನ್ನು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತಿ ಮನೆಗೆ ಕಸದ ಚೀಲಗಳನ್ನು ವಿತರಿಸಲಾಗುತ್ತಿದ್ದು ಅದರಲ್ಲಿ ಕಸ ಸಂಗ್ರಹಿಸಲು ತಿಳಿಸಲಾಗಿದೆ. ಕಸವಿಲೆವಾರಿಗೆ ಪ್ರತಿದಿನ ಪಂಚಾಯತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ.
ಕಸ ವಿಲೇವಾರಿಗೆ ಐದು ವಾಹನಗಳನ್ನು ನಿಯೋಜಿಸಲಾಗಿದೆ. ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಒಂದು ಗ್ರಾಮ ಪಂಚಾಯತ್ ಕಚೇರಿ ಎದುರುಗಡೆ ಇನ್ನೊಂದು ಮರಾಠಿ ಪ್ರಾಥಮಿಕ ಶಾಲೆ ಎದುರುಗಡೆ
ಗ್ರಾಮದ ಮುಖ್ಯ ಕೆರೆಯನ್ನು ಸೌಂದರ್ಯೀಕರಣ ಗೋಸ್ಕರ ಬಣ್ಣ ಸುಣ್ಣ ವ್ಯವಸ್ಥೆ ಮಾಡಲಾಗುತ್ತಿದೆ.

ಸರಕಾರಿ ಇಲಾಖೆಗಳ ಯೋಜನೆಗಳು ಹಾಗೂ ಗ್ರಾಮ ಪಂಚಾಯತ್ ಯೋಜನೆಗಳ ಕುರಿತು ಭಿತ್ತಿ ಪತ್ರ ಗಳನ್ನು ಅಳವಡಿಸಲಾಗುತ್ತಿದೆ ಜಾತ್ರಾ ಕಮಿಟಿ ಅವಶ್ಯಕತೆಗೆ ಅನುಗುಣವಾಗಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗುತ್ತಿದೆ. ನೀರಿನ ಟ್ಯಾಂಕರ್ ಗಾಗಿ ಕಾಕತಿ,ಕೆಎಚ ಕಂಗ್ರಾಳಿ, ಹೂನಗಾ, ಬೀಗರಣಿ ಸೇರಿದಂತೆ 5 ಗ್ರಾಮ್ ಪಂಚಾಯ್ತಿಗಳಿಂದ ಸಹಾಯ ಕೇಳಲಾಗಿದೆ.

ಸಚಿವೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೆಚ್ಚುವರಿಯ ಅನುದಾನದ ಅಡಿಯಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ.
ಇದು ಗ್ರಾಮ ಪಂಚಾಯತ್ ಕೈಗೊಂಡಿರುವ ಕ್ರಮಗಳಾದರೆ ಜಾತ್ರಾ ಮಹೋತ್ಸವ ಕಮಿಟಿ ಕೂಡ ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜಯರಾಮ್ ಪಾಟೀಲ್ ಅಧ್ಯಕ್ಷತೆಯಲ್ಲಿ ಜಾತ್ರಾ ಮಹೋತ್ಸವ ಕಮಿಟಿ ಗ್ರಾಮದೇವಿಯ ಜಾತ್ರೆಯ ಪೂಜಾ ವಿಧಿ ವಿಧಾನಗಳು ಹಾಗೂ ಜಾತ್ರೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳತ್ತಿದೆ. ಏಪ್ರಿಲ್ 28ರಿಂದ ಮೇ 6 ಆರರವರೆಗೆ ಜಾತ್ರೆ ನಡೆಯಲಿದ್ದು ಅದಕ್ಕಾಗಿ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಹಾಗೂ ಸ್ವಯಂಸೇವಕರ ತಂಡಗಳನ್ನು ಶಾಂತಿ ಹಾಗೂ ಸುರಕ್ಷತೆಯ ಸಲುವಾಗಿ ನಿಯೋಜಿಸಲಾಗಿದೆ.



