LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬ್ರೇಕಪ್ ವದಂತಿಗೆ ಪ್ರತಿಕ್ರಿಯೆ ಕೊಟ್ಟ ಅನುಪಮಾ ಪರಮೇಶ್ವರನ್

Advertisement
Advertisement

ತ್ತೀಚೆಗೆ ಇನ್‌ಸ್ಟಾಗ್ರಾಂ  ಮನಸ್ಸಿನ ಕನ್ನಡಿ ಆಗುತ್ತಿದೆ. ಸಂಬಂಧ ಬೆಸೆದಿದ್ದು, ಅದೇ ಸಂಬಂಧ ಕಡಿದುಕೊಂಡಿರುವುದು ಕೂಡ ಇನ್‌ಸ್ಟಾಗ್ರಾಂ ಪೋಸ್ಟ್‌ಗಳ ಮೂಲಕವೇ ತಿಳಿದುಬರುತ್ತಿದೆ. ಇದೀಗ ನಟಿ ಅನುಪಮಾ ಪರಮೇಶ್ವರನ್  ವಿಚಾರದಲ್ಲೂ ಹಾಗೆಯೇ ಆಗಿದೆ.

ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಹಾಕುತ್ತಿದ್ದ ಪೋಸ್ಟ್‌ಗಳು ಮಾನಸಿಕ ಚೇತರಿಕೆ ಮತ್ತು ಆತ್ಮಶೋಧನೆಯ ಕುರಿತಾಗಿದ್ದವು. ಹೀಗಾಗಿ ಇತ್ತೀಚೆಗೆ ಕೇಳಿಬಂದಿದ್ದ ಅವರ ಪ್ರಿಯಕರನೊಂದಿಗಿನ ಬ್ರೇಕಪ್ ವಿಚಾರಕ್ಕೆ ಅದು ಹೊಂದಿಕೆಯಾಗುವಂತಿತ್ತು. ಆದರೆ, ಇನ್‌ಸ್ಟಾಗ್ರಾಂ ಪೋಸ್ಟ್‌ಗೂ ವೈಯಕ್ತಿಕ ವಿಚಾರಕ್ಕೂ ಹೋಲಿಕೆ ಮಾಡುವುದನ್ನು ನಿಲ್ಲಿಸಿ ಎಂದು ಹೇಳುವ ಮೂಲಕ ವದಂತಿಗೆ ನಟಿ ಅನುಪಮಾ ತೆರೆ ಎಳೆದಿದ್ದಾರೆ.

ನಟಿ ಅನುಪಮಾ ಪರಮೇಶ್ವರನ್ ಹಾಗೂ ‘ಬೈಸನ್ ಕಾಲಮಾದನ್’ ಚಿತ್ರದ ನಟ ಧ್ರುವ್ ವಿಕ್ರಮ್ ನಡುವೆ ಪ್ರೀತಿ ಇದೆ ಎನ್ನುವುದು ಕೂಡ ವದಂತಿಯಾಗಿಯೇ ಹರಿದಾಡುತ್ತಿದೆ. ಆದರೆ, ʼಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲʼ ಎನ್ನುವಂತೆ, ಈ ವಿಚಾರವೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೀಗ ವೈರಲ್ ಆಗಿರುವ ಬ್ರೇಕಪ್ ವದಂತಿಯ ಕುರಿತು ಅನುಪಮಾ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬರುವ ಚಿತ್ರ ‘ಕ್ರೇಜಿ ಕಲ್ಯಾಣಂ’ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅನುಪಮಾ, ಈ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದರು. ʼಇದು ನನ್ನ ಸೋಷಿಯಲ್ ಮೀಡಿಯಾ ಖಾತೆ. ಏನು ಪೋಸ್ಟ್ ಮಾಡಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ. ನಾನು ನನ್ನ ಹತಾಶೆಯನ್ನು ಹೊರಹಾಕುತ್ತಿರಲಿಲ್ಲ. ಬದಲಾಗಿ, ಒಬ್ಬ ಮಹಿಳೆ ತನ್ನ ಜೀವನದ ಹಂತಗಳಲ್ಲಿ ಬದಲಾಗುವ ಅಥವಾ ಪರಿವರ್ತನೆಗೊಳ್ಳುವ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದೆ ಅಷ್ಟೇ. ಹಾಗೆ ಮಾಡಿದ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಬಗ್ಗೆ ನಿಮಗೇನು ಗೊತ್ತು? ನನ್ನ ಜೀವನದ ಬಗ್ಗೆ ನಿಮಗೇನು ಗೊತ್ತು? ಹಾಗಾಗಿ, ಪರವಾಗಿಲ್ಲ. ಇದು ನನ್ನ ಇನ್‌ಸ್ಟಾಗ್ರಾಂ. ನನಗೆ ಇಷ್ಟವಾದುದನ್ನೆಲ್ಲ ಪೋಸ್ಟ್ ಮಾಡುತ್ತೇನೆʼ ಎಂದು ಉತ್ತರಿಸುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಕೆ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರುತಂದೆ ಮೊಬೈಲ್ ಕೊಡಿಸದಿದ್ದಕ್ಕೆ 13 ವರ್ಷದ ಮಗ ಆತ್ಮಹತ್ಯೆನಾಳೆ ರಾಜೀನಾಮೆ ಕೊಡ್ತೀನಿ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಳೂರು ಗೋಪಾಲಕೃಷ್ಣ ಆಕ್ರೋಶನಾನು ರಾಜೀನಾಮೆ ಬೆದರಿಕೆ ಹಾಕಿಲ್ಲ: ಎಸ್‌ಎಸ್‌ ಮಲ್ಲಿಕಾರ್ಜುನ್‌ಡಿವೋರ್ಸ್‌ ಬಳಿಕ ಖಿನ್ನತೆ; 5ನೇ ಮಹಡಿಯಿಂದ ಹಾರಿ ಮನೋವೈದ್ಯೆ ಆತ್ಮಹತ್ಯೆಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ಬ್ರಿಜ್ ಭೂಷಣ್ ಶರಣ್ ಸಿಂಗ್ ಖುಲಾಸೆಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ: ತನ್ವೀರ್ ಸೇಠ್ ಅಸಮಾಧಾನಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ: ರುದ್ರಪ್ಪ ಲಮಾಣಿಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರಿಯಾಕೃಷ್ಣ ಬೆಂಬಲಿಗರ ತೀವ್ರ ಆಕ್ರೋಶಬ್ರೇಕಪ್ ವದಂತಿಗೆ ಪ್ರತಿಕ್ರಿಯೆ ಕೊಟ್ಟ ಅನುಪಮಾ ಪರಮೇಶ್ವರನ್