LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂಬೇಡ್ಕರ್: ಚಿಂತನೆ ಉಳಿದಿದೆಯೇ, ಹೆಸರು ಮಾತ್ರವೇ...?

ಭಾರತದ ಸಂವಿಧಾನ ಶಿಲ್ಪಿ, ದೀನದಲಿತರ ಉದ್ಧಾರಕ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾದ ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ದೇಶವೇ ಅಲ್ಲ, ವಿಶ್ವವೇ ಆಚರಿಸಲು ಸಜ್ಜಾಗಿದೆ. ಇದು ಕೇವಲ ಒಂದು ಆಚರಣೆಯ ದಿನವಾಗಿರದೇ ಆತ್ಮಪರಿಶೀಲನೆಗೆ ಕರೆ ನೀಡುವ ದಿನವಾಗಿದೆ.

ಅಂಬೇಡ್ಕರ್ ಅಂದರೆ ಕೇವಲ ಒಂದು ಹೆಸಲ್ಲ ಅದು ಒಂದು ಚಳವಳಿ, ಒಂದು ಚಿಂತನೆ, ಒಂದು ಕ್ರಾಂತಿ. ಅವರು ಭಾರತದ ಸಮಾಜದಲ್ಲಿದ್ದ ಮೂಢನಂಬಿಕೆಗಳು, ಜಾತಿ ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಧೈರ್ಯವಾಗಿ ಹೋರಾಡಿದ ಮಹಾನ್ ನಾಯಕ. “ಶಿಕ್ಷಣ ಹೊಂದಿ, ಸಂಘಟಿತರಾಗಿ, ಹೋರಾಟ ಮಾಡಿ” ಎಂಬ ಅವರ ಮಂತ್ರವು ಇಂದಿಗೂ ಸಮಾನವಾಗಿ ಪ್ರಸ್ತುತವಾಗಿದೆ.

ನಾವು ನಿಜವಾಗಿಯೂ ಅಂಬೇಡ್ಕರ್ ಅವರ ಮಾರ್ಗವನ್ನು ಅನುಸರಿಸುತ್ತಿದ್ದೇವಯೇ...?

ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದರೂ, ನಮ್ಮ ಸಮಾಜದಲ್ಲಿ ಜಾತಿ ರಾಜಕಾರಣ ಇನ್ನೂ ಬಲವಾಗಿಯೇ ಉಳಿದಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆಯೇ ಹೊರತು, ಅಂಬೇಡ್ಕರ್ ಅವರ ಮೂಲ ಸಿದ್ಧಾಂತಗಳು ಅಳವಡಿಕೆಯಾಗುತ್ತಿವೆ ಎಂಬುವುದು ಸಂಶಯ. ಹಲವಾರು ರಾಜಕೀಯ ನಾಯಕರು ಅವರ ಹೆಸರನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ.

ಅಂಬೇಡ್ಕರ್ ಅವರು ಸದಾ ಅಧಿಕಾರವೇ ಸರ್ವಾಂಗಿಣ ಅಭಿವೃದ್ಧಿಗೆ ದಾರಿ ಎಂದು ನಂಬಿದ್ದರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ದಲಿತ ಸಮುದಾಯದ ರಾಜಕೀಯ ಪ್ರತಿನಿಧಿತ್ವ ಇನ್ನೂ ಸಮರ್ಪಕವಾಗಿ ಕಂಡುಬರುತ್ತಿಲ್ಲ. ದೇಶಕ್ಕೆ ಇನ್ನೂ ಒಬ್ಬ ದಲಿತ ಪ್ರಧಾನಮಂತ್ರಿ ಅಥವಾ ಹಲವು ರಾಜ್ಯಗಳಲ್ಲಿ ಸಮರ್ಪಕ ದಲಿತ ನಾಯಕತ್ವ ಕಾಣಿಸದಿರುವುದು ಚಿಂತಾಜನಕ ಸಂಗತಿ. ಇದು ಕೇವಲ ರಾಜಕೀಯ ವೈಫಲ್ಯವಲ್ಲ ಇದು ಸಮುದಾಯದ ಒಗ್ಗಟ್ಟಿನ ಕೊರತೆಯನ್ನೂ ತೋರಿಸುತ್ತದೆ. ವಿಭಜನೆಯಿಂದ ದುರ್ಬಲವಾದ ದಲಿತ ಶಕ್ತಿಗಳು ಒಂದಾಗಬೇಕಾದ ಅವಶ್ಯಕತೆ ಇಂದು ಹೆಚ್ಚಾಗಿದೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ನೀಡಿದ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ನಾವು ಇನ್ನೂ ಹಿನ್ನಡೆಯಲ್ಲಿದ್ದೇವೆ.

 

ಇತಿಹಾಸದಲ್ಲಿ ಪುಣೆ ಒಪ್ಪಂದ ಮಹತ್ವದ ತಿರುವಾಗಿದ್ದು, ದಲಿತರ ರಾಜಕೀಯ ಹಕ್ಕುಗಳಿಗೆ ದಾರಿ ತೆರೆದಿತ್ತು. ಆದರೆ ಇಂದಿಗೂ ಆ ಹಕ್ಕುಗಳ ಸಂಪೂರ್ಣ ಅನುಭವ ನಮಗೆ ಸಿಗುತ್ತಿದೆಯೇ ಎಂಬ ಪ್ರಶ್ನೆ ಉಳಿದಿದೆ. ಅಂಬೇಡ್ಕರ್ ಜಯಂತಿ ಎಂದರೆ ಕೇವಲ ಮೆರವಣಿಗೆ, ಹಾರ-ಹೂವಿನ ಅಲಂಕಾರ ಮಾತ್ರವಲ್ಲ. ಅದು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ — ಈ ಮೂರು ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಸಾರುವುದು ನಮ್ಮ ಕರ್ತವ್ಯ.

ಅವರ ಆದರ್ಶಗಳನ್ನು ಅನುಸರಿಸುವ ಮೂಲಕವೇ ನಾವು ನಿಜವಾದ ಗೌರವವನ್ನು ಸಲ್ಲಿಸಬಹುದು. ಇಲ್ಲದಿದ್ದರೆ, ಆಚರಣೆಗಳು ಕೇವಲ ರೂಪಕಗಳಾಗಿ ಉಳಿದುಬಿಡುತ್ತವೆ. ಅಂಬೇಡ್ಕರ್ ಜಯಂತಿಯ ಈ ಸಂದರ್ಭದಲ್ಲಿ, ನಾವು ಪ್ರತಿಯೊಬ್ಬರೂ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳೋಣ — “ನಾವು ಅವರ ಮಾರ್ಗದಲ್ಲಿ ನಡೆಯುತ್ತಿದ್ದೇವೆಯೇ ಅಥವಾ ಕೇವಲ ಅವರ ಹೆಸರನ್ನು ಮಾತ್ರ ಉಚ್ಛರಿಸುತ್ತಿದ್ದೇವೆಯೇ?

  • ರತ್ನಾಕರ ಗೌಂಡಿ

Advertisement

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಲಿಕೆ ಬಿಜೆಪಿ ಸದಸ್ಯರ ವಿರುದ್ಧ ವಿಜಯೇಂದ್ರಗೆ ವಿವಿಧ ಕನ್ನಡ ಸಂಘಟನೆಗಳ ದೂರುಪಾಲಿಕೆ ವಿರುದ್ಧ ಹೋರಾಟ ಮುಂದುವರಿಸಲು ವಿವಿಧ ಕನ್ನಡ ಸಂಘಟನೆಗಳ ನಿರ್ಧಾರಬೆಳಗಾವಿ ನಗರದ ‘ಸ್ವಚ್ಛ ಶನಿವಾರ’ ಅಭಿಯಾನಕ್ಕೆ ಜಿಪಂ ಆವರಣದಲ್ಲಿ ಚಾಲನೆವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವುಕರ್ನಾಟಕ ಹೈಕೋರ್ಟ್‌ನಲ್ಲಿ ಬೃಹತ್ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ!ಪೊಲೀಸ್ ಠಾಣೆಯಲ್ಲೇ ಪ್ರೇಮಿಗಳ ಕುಟುಂಬದ ಮಧ್ಯೆ ಗಲಾಟೆ, ಗರ್ಭಿಣಿ ಮೇಲೂ ಹಲ್ಲೆ!ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ ಇಬ್ಬರು ಬಲಿ: ಮೈಸೂರಲ್ಲಿ ರೈತ ಮಹಿಳೆ, ಬಳ್ಳಾರಿಯಲ್ಲಿ ಯುವಕ ಸಿಡಿಲಿಗೆ ಸಾವು!ಬೆಂಗ್ಳೂರು – ಮೈಸೂರು ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ 26 ಲಕ್ಷ ದೋಚಿದ ಖದೀಮರುಚನ್ನಗಿರಿಯಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆಡಿಕೆಶಿ ಮುಂದಿನ ಸಿಎಂ ಬ್ಯಾನರ್, ಕಾರ್ಯಕರ್ತರ ಅಭಿಮಾನ ತಡಿಯೋಕೆ ಸಾಧ್ಯವಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್