ಡಾ .ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯಿಂದಾಗಿ ಭಾರತ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿದೆ :ಪ್ರಿಯಾಂಕಾ ಜಾರಕಿಹೊಳಿ
Google News | Join WhatsApp | Join Telegram | Live |
Panchayat Swaraj Samachar News Desk.
ಬೆಳಗಾವಿ: ಕಡೋಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾದ ಪ್ರಿಯಾಂಕ ಜಾರಕಿಹೊಳಿ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡುತ್ತಾ ಕಾಂಗ್ರೆಸ್ ನೀತಿಗಳ ಕುರಿತು ಮತ್ತು ಜನಪರ ಕಾರ್ಯಕ್ರಮಗಳು ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ದೇಶದ ಪ್ರಥಮ ಮಹಿಳಾ ದಿವಂಗತ ಮಾಜಿ ಪ್ರಧಾನಿ ಇಂದ್ರಾಗಾಂಧಿಯ ಅವರ ಹೆಸರು ಪ್ರಸ್ತಾಪಿಸಿದ ಪ್ರಿಯಾಂಕಾ ಜಾರಕಿಹೊಳಿ ಇಂದಿರಾ ಗಾಂಧಿಯವರು ದಿಟ್ಟ ನಿರ್ಧಾರಗಳಿಂದ ಇಂದು ದೇಶ ಬಲಿಷ್ಠವಾಗಿದೆ .ಮತ್ತು ಪ್ರಗತಿ ಪರವಾಗಿ ನಡೆಯುತ್ತಿದೆ. ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ.
ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಕೈಗೊಂಡ ಆರ್ಥಿಕ ನೀತಿಗಳು ಇಂದಿಗೂ ಭಾರತವನ್ನು ಆರ್ಥಿಕವಾಗಿ ಬಲಿಷ್ಠ ಮತ್ತು ಸದೃಢವಾಗಿ ಇದೆ ಅದೇ ರೀತಿ ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೈಗೊಂಡಿರುವ ಪಂಚ್ ಗ್ಯಾರಂಟಿಗಳು ಬಡ ಜನರ ಆರ್ಥಿಕ ಪಟ್ಟವನ್ನು ಸುಧಾರಣೆ ಮಾಡಿದ ಜನಪರ ಕಾರ್ಯಕ್ರಮಗಳನ್ನು ಘೋಷಿಸಿ ಅದನ್ನು ಅನುಷ್ಠಾನಗೊಳಿಸಲಾಗಿದೆ.
ಒಂದು ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ಕಾಂಗ್ರೆಸ್ ಸರ್ಕಾರಗಳ ಜನಪರ ಕಾರ್ಯಕ್ರಮದ ಕುರಿತು ಜನರಿಗೆ ಅರಿವು ಮೂಡಿಸಬೇಕಾಗಿದೆ ರಾಜ್ಯ ಸರ್ಕಾರ ಪ್ರತಿಯೊಂದು ಯೋಜನೆಗಳನ್ನು ಜನಪರ ಯೋಜನೆಗಳನ್ನಾಗಿ ಅನುಷ್ಠಾನಗೊಳಿಸುತ್ತಾ ಇದೆ ಆದ್ದರಿಂದ ಕಾಂಗ್ರೆಸ್ ದೇಶಕ್ಕೆ ಅವಶ್ಯಕತೆ ಇದೆ ಎಂದು ಪ್ರಿಯಾಂಕ ಜಾರಕಿಹೊಳಿ ತಿಳಿಸಿದರು.
Google News | Join Facebook | Live | 24/7 Help Desk |