ಅನಾಥ ಮಕ್ಕಳಿಗೆ ಬೆಳ್ಳಿ ವಸ್ತುಗಳನ್ನು ನೀಡಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ಸಮಾಜ ಸೇವಕ ಆಕಾಶ ಹಲಗೇಕರ್
ಸಮಾಜ ಸೇವೆಯ ಮೂಲಕ ಜನಮನ ಗೆದ್ದಿರುವ ಸಮಾಜ ಸೇವಕ ಆಕಾಶ ಹಲಗೇಕರ್ ಅವರು ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಅರ್ಥಪೂರ್ಣ ಹಾಗೂ ಸರಳ ರೀತಿಯಲ್ಲಿ ಆಚರಿಸಿಕೊಂಡರು. ವೈಭವದ ಆಚರಣೆ, ಆಡಂಬರದ ಕಾರ್ಯಕ್ರಮಗಳು ಮತ್ತು ಅನಗತ್ಯ ಖರ್ಚುಗಳಿಗೆ ದೂರವಿದ್ದು, ಅನಾಥ ಮಕ್ಕಳ ಮುಖದಲ್ಲಿ ಸಂತಸ ಮೂಡಿಸುವ ಉದ್ದೇಶದಿಂದ ಮಕ್ಕಳಿಗೆ ಬೆಳ್ಳಿ ವಸ್ತುಗಳನ್ನು ವಿತರಿಸಿ ತಮ್ಮ ಜನ್ಮದಿನವನ್ನು ವಿಶೇಷಗೊಳಿಸಿದರು.
ಈ ಸಂದರ್ಭದಲ್ಲಿ ಅನಾಥ ಆಶ್ರಮಕ್ಕೆ ಭೇಟಿ ನೀಡಿದ ಆಕಾಶ ಹಲಗೇಕರ್ ಅವರು ಮಕ್ಕಳೊಂದಿಗೆ ಆತ್ಮೀಯವಾಗಿ ಸಮಯ ಕಳೆಯುವುದರ ಜೊತೆಗೆ ಅವರ ಯೋಗಕ್ಷೇಮ ವಿಚಾರಿಸಿದರು. ನಂತರ ಪ್ರತಿಯೊಬ್ಬ ಮಗುವಿಗೂ ಬೆಳ್ಳಿ ವಸ್ತುಗಳನ್ನು ನೀಡಿ ಶುಭಾಶಯಗಳನ್ನು ತಿಳಿಸಿದರು. ಅವರ ಈ ಮಾನವೀಯ ಕಾರ್ಯದಿಂದ ಮಕ್ಕಳು ಸಂತೋಷಗೊಂಡರು.
"ಹುಟ್ಟುಹಬ್ಬ ಎಂದರೆ ಕೇವಲ ಕೇಕ್ ಕತ್ತರಿಸುವುದು ಅಥವಾ ಸಂಭ್ರಮಿಸುವುದು ಮಾತ್ರವಲ್ಲ. ಸಮಾಜಕ್ಕೆ ಉಪಯೋಗವಾಗುವ ಒಂದು ಸಣ್ಣ ಸೇವೆ ಮಾಡಿದರೆ ಅದೇ ನಿಜವಾದ ಸಂಭ್ರಮ" ಎಂಬ ಸಂದೇಶವನ್ನು ಅವರು ತಮ್ಮ ನಡೆ ಮೂಲಕ ಸಾರಿದರು.
ಈ ಸೇವಾ ಕಾರ್ಯಕ್ಕೆ ಹಲವಾರು ಗಣ್ಯರು, ಸ್ನೇಹಿತರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಇಂತಹ ಮಾನವೀಯ ಕಾರ್ಯಗಳು ಹೆಚ್ಚಾಗಬೇಕು ಎಂದು ಆಶಿಸಿದರು. ಆಕಾಶ ಹಲಗೇಕರ್ ಅವರ ಈ ಸಮಾಜಮುಖಿ ಕಾರ್ಯವು ಯುವಕರಿಗೆ ಮಾದರಿಯಾಗಿದ್ದು, ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸುವ ಉತ್ತಮ ಸಂಪ್ರದಾಯಕ್ಕೆ ಪ್ರೇರಣೆಯಾಗಿದೆ.
ಈ ಸಂದರ್ಭದಲ್ಲಿ ಆಕಾಶ್ ಹಲಗೇಕರ್, ದೀಪಕ್ ಕೇತಕರ್, ಭಾವಕೇಶ್ ಪಿರಗಣ್ಣವರ್, ಪರಶುರಾಮ ಮಂಗಣ್ಣವರ್, ಶ್ವೇತಾ ಕೋಟ್ಯಾನ್, ಶಿಲ್ಪಾ ಮಠಪತಿ, ಮಹಾಂತೇಶ್ ಕೋಲಕಾರ, ಕಿರಣ ಶಿಂದೊಳಿಕರ,ಶಶಿಕುಮಾರ್ ಹುಲ್ಲೊಳ್ಳಿ, ಶ್ರೀ ಮಂಗಣ್ಣವರ್, ರಾಜಕುಮಾರ್ ರಾಠೋಡ, ಸಿದ್ಧಾರ್ಥ ಸಂಪಗಾವಿ ಮುಂತಾದವರು ಈ ಶುಭ ಸಂದರ್ಭಕ್ಕೆ ಸಾಕ್ಷಿಯಾದರು.

