LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆನಡಾದಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆ; 7 ತಿಂಗಳ ಬಳಿಕ ಪ್ರಿಯಕರ ಅರೆಸ್ಟ್‌

Advertisement
Advertisement

ಒಟ್ಟಾವೊ: ಕೆನಡಾದ (Canada) ಟೊರೊಂಟೊದಲ್ಲಿ  ಭಾರತೀಯ ಮೂಲದ ಮಹಿಳೆ ಕೊಲೆ ಪ್ರಕರಣದಲ್ಲಿ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 20 ರಂದು ಟೊರೊಂಟೊದ ನಿವಾಸವೊಂದರಲ್ಲಿ 30 ವರ್ಷದ ಹಿಮಾಂಶಿ ಖುರಾನಾ ಶವವಾಗಿ ಪತ್ತೆಯಾಗಿದ್ದರು. ಆಕೆಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಕೊಲೆಯಾದ 7 ತಿಂಗಳ ಬಳಿಕ ಆಕೆಯ ಪ್ರಿಯಕರ ಲಾಕ್‌ ಆಗಿದ್ದಾನೆ. 

ಕೊಲೆಯಾದ ಮಹಿಳೆಯ ಸಂಗಾತಿ, ಟೊರೊಂಟೊದವನಾದ ಅಬ್ದುಲ್ ಗಫೂರಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಏನು?
2025ರ ಡಿಸೆಂಬರ್‌ನಲ್ಲಿ ಟೊರೊಂಟೊದಲ್ಲಿ ಹಿಮಾಂಶಿ ಖುರಾನಾ ಶವವಾಗಿ ಪತ್ತೆಯಾಗಿದ್ದರು. ಸ್ಟ್ರಾಚನ್ ಅವೆನ್ಯೂ ಮತ್ತು ವೆಲ್ಲಿಂಗ್ಟನ್ ಸ್ಟ್ರೀಟ್ ವೆಸ್ಟ್ ಪ್ರದೇಶದಿಂದ ರಾತ್ರಿ 10:41 ರ ಸುಮಾರಿಗೆ ಆಕೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಲಾಗಿತ್ತು. ಟೊರೊಂಟೊ ಪೊಲೀಸರು ಹುಡುಕಾಟ ನಡೆಸಿದಾಗ, ಅದೇ ಪ್ರದೇಶದ ಮನೆಯೊಂದರಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ ಎಂದು ಪೊಲೀಸರು ತಿಳಿಸಿದ್ದರು. 

ಹಿಮಾಂಶಿ ಮತ್ತು ಅಬ್ದುಲ್‌ಗೆ ಸಂಬಂಧ ಇರುವುದು ಪೊಲೀಸ್‌ ತನಿಖೆ ವೇಳೆ ತಿಳಿದುಬಂತು. ಆತನ ಬಂಧನಕ್ಕೆ ದೇಶಾದ್ಯಂತ ವಾರಂಟ್ ಹೊರಡಿಸಲಾಯಿತು. ಆರೋಪಿಯ ಭಾವಚಿತ್ರವನ್ನು ಬಿಡುಗಡೆ ಮಾಡಿ, ಯಾರಿಗಾದರು ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿಗೆ ಬರ್ತಿದ್ದ ಬಸ್‌ ಅಪಘಾತ – ಸೇತುವೆಯಿಂದ ಉರುಳಿ ಬಿದ್ದು 40 ಮಂದಿಗೆ ಗಾಯಕೊಡಗಿನ ಅಬ್ಬೆ ಫಾಲ್ಸ್‌ಗೆ ಜೀವ ಕಳೆ – ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲಧಾರೆ ಕಂಡು ಪ್ರವಾಸಿಗರು ಖುಷ್‌ಅನಾಥ ಮಕ್ಕಳಿಗೆ ಬೆಳ್ಳಿ ವಸ್ತು ನೀಡಿ ಸೋದರ ಮಾವನಾದ ಸಮಾಜ ಸೇವಕ ಆಕಾಶ ಹಲಗೇಕರ್ಕೇಸ್‌ಗಳು ಯಾರ ಮೇಲಿಲ್ಲ? – ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಡಿಕೆಶಿ ತಿರುಗೇಟುD-Mart : डीमार्टमध्ये 99 रुपयांना मिळणारी ही वस्तू खरेदीसाठी ग्राहकांची उडते झुंबड, कितीही स्टॉक असू द्या, तासाभरात संपतोಹಾಸನದಲ್ಲಿ ರಾಜಕೀಯದಲ್ಲಿ ಬದಲಾವಣೆ ಗಾಳಿ: ಕಾಂಗ್ರೆಸ್‌ಗೆ ಹತ್ತಿರವಾಗುತ್ತಿದ್ದಾರಾ ಮಾಜಿ ಶಾಸಕ ಪ್ರೀತಂ ಗೌಡ?ಆರೈಕೆ ಮಾಡಲಾಗದೇ 50 ದಿನದ ಹಸುಗೂಸು ಕೊಂದ ನೀಚ ತಾಯಿ – ಅಪ್ಪ, ಅಮ್ಮ, ಸಹೋದರ ಸಾಥ್‌, ನಾಲ್ವರು ಅರೆಸ್ಟ್‌ಡೇಟಿಂಗ್ ಆಪ್‌ನಲ್ಲಿ ಗಾಳ ಹಾಕಿ ಖಾಸಗಿ ವಿಡಿಯೋ ಸೆರೆ – ಮಾಯಾವಿ ನಂಬಿ ಬಂದವರಿಗೆ ಕೋಟಿ ಕೋಟಿ ನಾಮ!Gen Z ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದಕ್ಕೆ ರಾಜೀನಾಮೆ: ಧರ್ಮೇಂದ್ರ ಪ್ರಧಾನ್‌ಕೆನಡಾದಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆ; 7 ತಿಂಗಳ ಬಳಿಕ ಪ್ರಿಯಕರ ಅರೆಸ್ಟ್‌