ಬೆಂಗಳೂರು: ಹಲವು ಸುತ್ತಿನ ಸಭೆಯ ಬಳಿಕ ಡಿಕೆ ಶಿವಕುಮಾರ್ ಸಂಪುಟದ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಚಲುವರಾಯಸ್ವಾಮಿ ಅವರಿಗೆ ಕೃಷಿ, ಜಮೀರ್ ಅಹ್ಮದ್ ಅವರಿಗೆ ಗೃಹ ಮತ್ತು ವಕ್ಫ್ ಖಾತೆಯನ್ನು ನೀಡಲಾಗಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಮುನಿಯಪ್ಪ ಅವರಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಮಾಜ ಕಲ್ಯಾಣ ಸಚಿವಾಲಯವನ್ನು ನೀಡಲಾಗಿದೆ. ಮುನಿಯಪ್ಪ ಅವರು ಸಮಾಜಕಲ್ಯಾಣ ಖಾತೆ ಬೇಕೇಂದು ಪಟ್ಟು ಹಿಡಿದಿದ್ದರು. ಅದರಂತೆ ಈಗ ಆ ಖಾತೆಯನ್ನೇ ಹಂಚಿಕೆ ಮಾಡಲಾಗಿದೆ.
ಪ್ರಮಾಣವಚನ ಸ್ವೀಕರಿಸಿದ 19 ಮಂದಿ ಪೈಕಿ 15 ಮಂದಿಗೆ ಮಾತ್ರ ಈ ಗ ಖಾತೆ ಹಂಚಿಕೆ ಮಾಡಲಾಗಿದೆ. ಸಚಿವರಾದ ನಾಗೇಂದ್ರ , ವಿಜಯಾನಂದ ಕಾಶಪ್ಪನವರ್, ನರೇಂದ್ರ ಸ್ವಾಮಿ, ಟಿ ರಘುಮೂರ್ತಿ ಇಲ್ಲಿಯವರೆಗೆ ಖಾತೆ ಫೈನಲ್ ಆಗಿಲ್ಲ. ಈ ಸಚಿವರಿಗೆ ಯಾವ ಖಾತೆ ನೀಡಬೇಕು ಎನ್ನುವುದರ ಬಗ್ಗೆ ಹೈಕಮಾಂಡ್ ಜೊತೆ ಡಿಕೆಶಿ ಚರ್ಚೆ ಮಾಡುತ್ತಿದ್ದಾರೆ. ಎಲ್ಲವೂ ಅಂತಿಮವಾದ ಬಳಿಕ ಸಿಎಂ ಸಚಿವರ ಪಟ್ಟಿಯನ್ನು ಲೋಕಭವನಕ್ಕೆ ಕಳುಹಿಸಲಿದ್ದಾರೆ.
ಯಾರಿಗೆ ಯಾವ ಖಾತೆ?
1. ಚಲುವರಾಯಸ್ವಾಮಿ – ಕೃಷಿ ಇಲಾಖೆ
2. ಬಾಲಕೃಷ್ಣ – ಸಣ್ಣ ನೀರಾವರಿ-
3. ಸಮಾಜ ಕಲ್ಯಾಣ – ಮುನಿಯಪ್ಪ
4. ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
5. ಬಸವಂತಪ್ಪ- ಬಂದರು ಮೀನುಗಾರಿಕೆ ಇಲಾಖೆ
6. ಮಧುಬಂಗಾರಪ್ಪ- ಪ್ರಾಥಮಿಕ ಶಿಕ್ಷಣ ಇಲಾಖೆ
7. ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
8. ಜಮೀರ್ ಅಹಮದ್ ಖಾನ್ – ಹೌಸಿಂಗ್
9. ಲಕ್ಷ್ಮಣ್ ಸವದಿ- ಸಹಕಾರ
10. ಅಜಯ್ ಸಿಂಗ್- ಅರಣ್ಯ ಇಲಾಖೆ
11. ಎಸ್. ಎಸ್.ಮಲ್ಲಿಕಾರ್ಜುನ – ಗಣಿಗಾರಿಕೆ
12. ರಿಜ್ವಾನ್ – ಆಹಾರ
13. ಶಿವರಾಜ್ ತಂಗಡಗಿ- ಹಿಂದುಳಿದ ವರ್ಗ
14. ಪುಟ್ಟರಂಗಶೆಟ್ಟಿ- ಪಶುಸಂಗೋಪನೆ ಇಲಖೆ
15. ಶಿವಲಿಂಗೇಗೌಡ – ಅಬಕಾರಿ

