ಮಾಜಿ ಮೇಯರ್ ಮನೆಯಲ್ಲಿ ಒಂದು ಕೋಟಿ ಮೌಲ್ಯದ ವಸ್ತು ಕಳ್ಳತನನ
Google News | Join WhatsApp | Join Telegram | Live |
Panchayat Swaraj Samachar News Desk.
ಬೆಂಗಳೂರು: ಮಾಜಿ ಮೇಯರ್ ಆರ್.ನಾರಾಯಣಸ್ವಾಮಿ ಮನೆಯಲ್ಲಿ 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬೆಲೆ ಬಾಳುವ ವಸ್ತುಗಳು, ನಗದು ಕಳ್ಳತನ ಮಾಡಲಾಗಿದೆ. ಈ ಘಟನೆ ಸಂಜಯನಗರದ ಆರ್ಎಂವಿ 2ನೇ ಹಂತದಲ್ಲಿರುವ ಆರ್.ನಾರಾಯಣಸ್ವಾಮಿ ಮನೆಯಲ್ಲಿ ನಡೆದಿದ್ದು ಮನೆ ಕಾಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಈ ಕೃತ್ಯ ಎಸಗಿದ್ದಾನೆ.
ಮನೆ ಕಾವಲುಗಾರ ನರಬಹದ್ದೂರ ಶಾಯಿ ಈ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಮನೆಯಲ್ಲಿ ಆರ್.ನಾರಾಯಣಸ್ವಾಮಿ ಸೇರಿ ಕುಟುಂಬಸ್ಥರು ಯಾರು ಇಲ್ಲದಾಗ ಮನೆ ಒಳಕ್ಕೆ ಹೋಗಿ ಲಾಕರ್ಗಳನ್ನು ತೆಗೆದಿದ್ದಾನೆ. ಈ ವೇಳೆ 99,75,000 ರೂಪಾಯಿ ಮೌಲ್ಯದ 1,425 ಗ್ರಾಂ ಚಿನ್ನಾಭರಣ, 18,92,000 ರೂ. ಮೌಲ್ಯದ 22 ಕೆ.ಜಿ ಬೆಳ್ಳಿ ವಸ್ತುಗಳು, 6.50 ಲಕ್ಷ ರೂ. ಮೌಲ್ಯದ 3 ವಾಚ್ಗಳು, 4 ಲಕ್ಷ ರೂಪಾಯಿ ನಗದು ಕದ್ದು ಸೆಕ್ಯೂರಿಟಿ ಗಾರ್ಡ್ ಎಸ್ಕೇಪ್ ಆಗಿದ್ದಾನೆ.
ಸದ್ಯ ಈ ಸಬಂಧ ಆರ್.ನಾರಾಯಣಸ್ವಾಮಿ ಅವರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು ಸೆಕ್ಯೂರಿಟಿ ಗಾರ್ಡ್ ನರಬಹದ್ದೂರನಿಗಾಗಿ ಬಲೆ ಬೀಸಿದ್ದಾರೆ.
Google News | Join Facebook | Live | 24/7 Help Desk |