ಬಿಜೆಪಿ ಬಟನ್ ಎಕೆ 47 ಇದ್ದಂತೆ – ಹಿಂದೂಗಳ ಸುರಕ್ಷತೆಗೆ ಅದನ್ನೇ ಒತ್ತಿ: ಯತ್ನಾಳ್

Apr 21, 2024 - 21:19
 9
Google  News Join WhatsApp Join Telegram Live

ಬಿಜೆಪಿ ಬಟನ್ ಎಕೆ 47 ಇದ್ದಂತೆ – ಹಿಂದೂಗಳ ಸುರಕ್ಷತೆಗೆ ಅದನ್ನೇ ಒತ್ತಿ: ಯತ್ನಾಳ್

Panchayat Swaraj Samachar News Desk.

ಕಲಬುರಗಿ: ಮತ ಯಂತ್ರದಲ್ಲಿ ಬಿಜೆಪಿ ಬಟನ್ ಒತ್ತಿದರೆ ಅದೇ ನಿಮಗೆ ಎಕೆ 47 ಇದ್ದ ಹಾಗೆ, ಹಿಂದೂಗಳು ಸುರಕ್ಷಿತರಾಗಿ ಉಳಿಯಬೇಕಾದರೆ ಅದನ್ನೇ ಒತ್ತಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ಉಲ್ಲೇಖಿಸಿ, ಬಿಜಾಪುರದಲ್ಲಿ ಒಂದಾದರು ಹಿಂದೂ ಹೆಣ್ಣು ಮಕ್ಕಳಿಗೆ ಕೆಣಕಿರುವ ಘಟನೆ ಆಗಿದೆಯಾ? ಮೊದಲು ತರಕಾರಿ ತರಲು ಹೋದ್ರೆ ಎ ಮಾಲ್ ಬಹುತ್ ಅಚ್ಚಾ ಹೈ ಎಂದು ಪರೋಕ್ಷವಾಗಿ ಹೇಳುತ್ತಿದ್ದರು. ಈಗ ನಮ್ಮ ಜನರು ಕೂಡ ತುಂಬಾ ಜಾಣರಾಗಿದ್ದಾರೆ. ಕುಂಕುಮ ಹಚ್ಚಿಕೊಂಡಿರುವವರನ್ನ ನೋಡಿ ಖರೀದಿ ಮಾಡ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 

ಈಗ ವಕ್ಫ್‍ಗೆ 12 ಲಕ್ಷ ಎಕರೆ ಜಮೀನಿದೆ. ಅವರು ಒಂದೇ ಒಂದು ಸಣ್ಣ ಗೋರಿ ಇದ್ದರೂ ಅದಕ್ಕೆ ಹಸಿರು ಚಾದರ ಹೊದಿಸಿ ಬಿಡ್ತಾರೆ. ಅದು ಯಾರ ಗೋರಿಯೋ ಏನೋ ಗೊತ್ತಿಲ್ಲ. ಪಂಡಿತ್ ಅಂತೆ, ಸುಮ್ಮನೆ ಪಂಡಿತ ಜವಾಹರ್ ಲಾಲ್ ನೆಹರು ಅಂತಾರೆ. ಇವರ ಸಮಯದಲ್ಲಿ 12 ಲಕ್ಷ ಎಕರೆ ಜಮೀನನ್ನು ವಕ್ಫ್‍ಗೆ ಕೊಟ್ಟಿದ್ದಾರೆ. ರಾಹುಲ್ ಯಾವುದು ಗೊತ್ತಿಲ್ಲ, ಪ್ರಿಯಾಂಕ ಯಾವುದು ಗೊತ್ತಿಲ್ಲ, ರಾಬರ್ಟ್ ವಾದ್ರ ಯಾವುದು ಅಂತಾನೂ ಗೊತ್ತಿಲ್ಲ. ಇಂದಿರಾ ಗಾಂಧಿ ಗಂಡ ಯಾವುದು ಏನು ಅಂತಾ ಗೊತ್ತಿಲ್ಲ ಎಂದು ಗಾಂಧಿ ಪರಿವಾರದ ವಿರುದ್ಧ ಏಕವಚನದಲ್ಲಿ ಅವರು ವಾಗ್ದಾಳಿ ನಡೆಸಿದ್ದಾರೆ.

Google News Join Facebook Live 24/7 Help Desk

Tags: