ಬೆಳಗಾವಿ ಕೋರ್ಟ್ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭರ್ಜರಿ ಪ್ರಚಾರ 

Apr 20, 2024 - 10:18
Apr 20, 2024 - 10:19
 45
Google  News Join WhatsApp Join Telegram Live

ಬೆಳಗಾವಿ ಕೋರ್ಟ್ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭರ್ಜರಿ ಪ್ರಚಾರ 

Panchayat Swaraj Samachar News Desk.

ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಶೆಟ್ಟರ್ ಬೆಳಗಾವಿ ನಗರದ ಕೋರ್ಟ್ ಆವರಣದಲ್ಲಿ ನ್ಯಾಯವಾದಿಗಳ ಮತ ಯೋಚನೆ ಮಾಡಿದರು,

 ಅಪಾರ ಸಂಖ್ಯೆಯಲ್ಲಿ ನ್ಯಾಯವಾದಿಗಳು ಜಗದೀಶ್ ಶೆಟ್ಟರ್ ಅವರ ಜೊತೆ ಕೋರ್ಟ್ ಆವರಣದಲ್ಲಿ ಹೆಜ್ಜೆ ಹಾಕಿ ಬಿಜೆಪಿ ಪರವಾಗಿ ಜಗದೀಶ್ ಶೆಟ್ಟರ್ ಪರವಾಗಿ ಮತಯಾಚನೆ ಮಾಡಿದರು.

 ಇದೇ ಸಂದರ್ಭದಲ್ಲಿ ಪಂಚಾಯತ್ ಸ್ವರಾಜ್ ಸಮಾಚಾರ ವಾಹಿನಿ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು ಜಗದೀಶ್ ಶೆಟ್ಟರ್ ನಾನು ಒಬ್ಬ ಕೂಡ ನ್ಯಾಯವಾದಿ ನನ್ನ ಸಹಉದ್ಯೋಗಿಗಳ ಜೊತೆ ಮತಯಾಚನೆ ಮಾಡಲು ಬಂದಿದ್ದೇನೆ ನನಗೆ ಪ್ರೀತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಪಾರ ಬೆಂಬಲ ಕೂಡ ನನಗೆ ನ್ಯಾಯವಾದಿಗಳ ಕಡೆಯಿಂದ ಬರ್ತಾ ಇದೆ. ಬಿಜೆಪಿ ಮೊದಲಿನಿಂದಲೂ ಬೆಳಗಾವಿ ಕ್ಷೇತ್ರದಲ್ಲಿ ಒಂದು ಬಿಜೆಪಿ ಪರ ಅಲ್ಲೇ ಇದೆ. ಈ ಅಲೆ ಮುಂದುವರೆಯಲಿದೆ ಬಿಜೆಪಿ ಪರ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಜಗದೀಶ್ ಶೆಟ್ಟರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 ಈ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಉಪಾಧ್ಯಕ್ಷರಾದ ಅನಿಲ್ ಬೆನಕೆ ಅವರು ಮಾತನಾಡಿ ಬೆಳಗಾವಿ ನ್ಯಾಯವಾದಿಗಳು ಜಗದೀಶ್ ಶೆಟ್ಟರ ಪರವಾಗಿ ಇದ್ದಾರೆ ಶೇಕಡ ನೂರರಷ್ಟು ನಾವು ಬೆಳಗಾವಿ ಕ್ಷೇತ್ರವನ್ನು ಬಿಜೆಪಿ ತೆಕ್ಕಿಗೆ ಹಾಕಿಕೊಳ್ಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಅನಿಲ್ ಬೆನಕೆ ಎಂ.ಎಸ್ ಜೀರಲಿ ದೇಶಪಾಂಡೆ, ಮುರುಘೇಂದ್ರ ಗೌಡ ಪಾಟೀಲ್, ಹನುಮಂತ್ ಕೊಂಗಾಳಿ ನ್ಯಾಯವಾದಿಗಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Google News Join Facebook Live 24/7 Help Desk

Tags: