ಬಿಜೆಪಿ ಪರವಾಗಿ ಉತ್ತರ ಮತಕ್ಷೇತ್ರದಲ್ಲಿ ಮತಯಾಚನೆ ಮಾಡಿದ ಮುರುಘೇಂದ್ರ ಗೌಡ ಪಾಟೀಲ್

May 2, 2024 - 09:32
 38
Google  News Join WhatsApp Join Telegram Live

ಬಿಜೆಪಿ ಪರವಾಗಿ ಉತ್ತರ ಮತಕ್ಷೇತ್ರದಲ್ಲಿ ಮತಯಾಚನೆ ಮಾಡಿದ ಮುರುಘೇಂದ್ರ ಗೌಡ ಪಾಟೀಲ್

Panchayat Swaraj Samachar News Desk.

ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಮುರುಘೇಂದ್ರಗೌಡ ಪಾಟೀಲ್ ಬೆಳಗಾವಿ ಉತ್ತರ ಮತಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

 

ಇದೇ ವೇಳೆ ಪಂಚಾಯತ್ ಸ್ವರಾಜ್ಯ ಸಮಾಚಾರದೊಂದಿಗೆ ಮಾತನಾಡಿದ ಮುರುಘೇಂದ್ರ ಗೌಡ ಪಾಟೀಲ ಮಾಜಿ ಮುಖ್ಯಮಂತ್ರಿಗಳು ಜಗದೀಶ್ ಶೆಟ್ಟರ್ ಬಿಜೆಪಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಬೆಳಗಾವಿ ಮೊದಲಿನಿಂದಲೂ ಬಿಜೆಪಿ ಭದ್ರಕೋಟೆಯಾಗಿದೆ ಈ ಚುನಾವಣೆ ಇಡೀ ವಿಶ್ವವೇ ನೋಡುವಂಥ ಚುನಾವಣೆಯಾಗಿದೆ ಎಂದರು.

ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ನರೇಂದ್ರ ಮೋದಿಯವರನ್ನು ಮಾಡಲು ದೇಶ ಅತುರವಾಗಿದೆ.ಚುನಾವಣೆ ಪ್ರಚಾರದಲ್ಲಿ ಅನುಭವಕ್ಕೆ ಬರುತ್ತಾ ಇದೆ. ಅದರಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಅವರನ್ನು ವಿಜಯಶಾಲಿಯನ್ನಾಗಿ ಮಾಡಿಸಿ ಮೂರನೇಯ ಬಾರಿ ನರೇಂದ್ರ ಮೋದಿಯವರ ಪ್ರಧಾನಮಂತ್ರಿ ಮಾಡುವುದೇ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಪ್ರತಿಯೊಬ್ಬ ಭಾರತೀಯರಾದ ನಮ್ಮ ಗುರಿಯಾಗಿದೆ .

ಈ ಸಂದರ್ಭದಲ್ಲಿ ನೇಹ ಹಿರೇಮಠ ಹತ್ಯಾಕಾಂಡದಲ್ಲಿ ರಾಜ್ಯ ಸರ್ಕಾರ ವರ್ತಿಸಿದ ರೀತಿ ಖಂಡನಿಯ. ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷ ಅವರನ್ನು ಪಕ್ಷದಿಂದ ವಜಾ ಗೊಳಿಸಿದೆ ಕಾನೂನು ಎಲ್ಲರಿಗೂ ಒಂದೇ ಯಾಗಿದೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಮುಘೇಂದ್ರ ಗೌಡ ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು

Google News Join Facebook Live 24/7 Help Desk

Tags: