LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಷ್ಯಾದ ಹಠಯೋಗಿಣಿಗೆ ಕಾಶಿ ಜಗದ್ಗುರುಗಳಿಂದ ಶಿವಯೋಗ ದೀಕ್ಷೆ

Advertisement
Advertisement
Advertisement

ಹುಬ್ಬಳ್ಳಿ: ರಷ್ಯಾದ ಪ್ರಸಿದ್ಧ ಹಠಯೋಗಿಣಿ ಮೊಲ್ಗಾ ಅವರಿಗೆ ವಾರಾಣಸಿಯ ಕಾಶಿ ಜ್ಞಾನ ಪೀಠದಲ್ಲಿ  ಶಿವಯೋಗ ದೀಕ್ಷೆ ನೀಡಲಾಯಿತು.

ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಮೊಲ್ಗಾ ಅವರಿಗೆ ಶಿವಯೋಗ ದೀಕ್ಷೆ ನೀಡಿ ಆಶೀರ್ವದಿಸಿದರು. 

ಶಿವಯೋಗವು ಬಾಹ್ಯ ಆಚರಣೆಗಳನ್ನು ಆಂತರಿಕ ಅನುಭಾವವಾಗಿ ಪರಿವರ್ತಿಸುವ ಮಹಾಸಾಧನವಾಗಿದ್ದು, ಆತ್ಮಜ್ಞಾನ ಹಾಗೂ ಪರಮಶಿವನ ಸಾನ್ನಿಧ್ಯದ ಅನುಭೂತಿಗೆ ಕರೆದೊಯ್ಯುವ ಶ್ರೇಷ್ಠ ಸಾಧನಾ ಪಥವಾಗಿದೆ ಎಂದು ಜಗದ್ಗುರುಗಳು ಹೇಳಿದರು.

ಪ್ರಾತಃಕಾಲ ನಡೆದ ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದ ಮೊಲ್ಗಾ ಅವರಿಗೆ ಶಿವಪಂಚಾಕ್ಷರಿ ಮಹಾಮಂತ್ರದೊಂದಿಗೆ ಶಿವಯೋಗ ದೀಕ್ಷೆ ನೀಡಲಾಯಿತು. ಭಾರತೀಯ ಪರಂಪರೆಯಂತೆ ಅವರಿಗೆ ‘ಹಠಯೋಗಿಣಿ ಮಾನಸಿದೇವಿ’ ಎಂದು ಮರುನಾಮಕರಣ ಮಾಡಲಾಯಿತು.

ದೀಕ್ಷೆ ಸ್ವೀಕರಿಸಿದ ಬಳಿಕ ಮಾತನಾಡಿದ ಮಾನಸಿದೇವಿ, ಕಾಶಿ ಜಗದ್ಗುರುಗಳ ತಪೋಹಸ್ತದಿಂದ ದೊರೆತ ಶಿವಯೋಗ ದೀಕ್ಷೆ ತಮ್ಮ ಹಠಯೋಗ ಸಾಧನಾ ಪಥಕ್ಕೆ ವಿಶಿಷ್ಟ ಪ್ರೇರಣೆಯ ಬೆಳಕು ನೀಡಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಹಾಗೂ ಶಿವಾಚಾರ್ಯ ಸ್ವಾಮೀಜಿಗಳು ಭಾಗವಹಿಸಿದ್ದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಳೆ ಕೊರತೆಯಿಂದ ತರಕಾರಿ ದರ ಏರಿಕೆ: ಗ್ರಾಹಕರು, ವ್ಯಾಪಾರಿಗಳು ಇಬ್ಬರು ಕಂಗಾಲುರಾಕಿಂಗ್ ಸ್ಟಾರ್ ಅಬ್ಬರ – ಮೊದಲ ದಿನವೇ 140 ಕೋಟಿ ಬಾಚಿದ ಟಾಕ್ಸಿಕ್ಮನೆಯಲ್ಲೇ 50 ಲಕ್ಷ ಕದ್ದ ಮಗ – ಗರ್ಲ್‌ಫ್ರೆಂಡ್‌ಗೆ 5 ಲಕ್ಷ ಖರ್ಚು, 1.5 ಲಕ್ಷದ iPhone ಗಿಫ್ಟ್!Bro Wait, ಭಾರತ್ ಮಾತಾ ಕಿ ಜೈ ಶುರು ಮಾಡೋಣ – ರಾಗಾ ಪಿತೃಪ್ರಧಾನ ವ್ಯವಸ್ಥೆ ಹೇಳಿಕೆಗೆ ಕಂಗನಾ ತಿರುಗೇಟುನಮ್ಮ ಧರ್ಮದ ಬಗ್ಗೆ ನಾವೇ ತೀರ್ಮಾನಿಸುತ್ತೇವೆ, ಹಿಜಾಬ್‌ ಆದೇಶ ಇಸ್ಲಾಂ ಮೇಲಿನ ನೇರ ದಾಳಿ – ಹೈಕೋರ್ಟ್ ತೀರ್ಪಿಗೆ ಓವೈಸಿ ಕಿಡಿಟ್ರಕ್‌ಗೆ ಕಾರು ಡಿಕ್ಕಿ – 23 ವರ್ಷದ ಯೂಟ್ಯೂಬರ್, ತಾಯಿ ಸಾವುನಾಗೇಂದ್ರ ಪಕ್ಷದ ಶಿಸ್ತಿನ ಸಿಪಾಯಿ ಸದ್ಯಕ್ಕೆ ರಾಜೀನಾಮೆ ವಿಚಾರ ಇಲ್ಲ: ಸಿಎಂತುಂಗಾ ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರುಪಾಲುಸಚಿವ ನಾಗೇಂದ್ರ ರಾಜೀನಾಮೆ ಕೊಡಲೇಬೇಕು: ನಿಖಿಲ್ ಕುಮಾರಸ್ವಾಮಿನಿಂತಿದ್ದ ಟಾಟಾ ಏಸ್‌ಗೆ ಬೈಕ್ ಡಿಕ್ಕಿ: ಮೂವರು ಸವಾರರು ಸ್ಥಳದಲ್ಲೇ ಸಾವು