LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೇಶದಲ್ಲೇ ಫಸ್ಟ್ – ಬೆಂಗಳೂರು ಈಗ ಟಾಪ್-1 ಟ್ರಾಫಿಕ್ ಸಿಟಿ

Advertisement
Advertisement

ಬೆಂಗಳೂರು: ಟ್ರಾಫಿಕ್ ಜಾಮ್‌ಗೆ ಹೆಸರು ವಾಸಿಯಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು, ಮತ್ತೆ ಟ್ರಾಫಿಕ್ ವಿಚಾರವಾಗಿ ಸುದ್ದಿಯಾಗಿದೆ. ಭಾರತದಲ್ಲಿ  ಬೆಂಗಳೂರು ಅತೀ ಹೆಚ್ಚು ಟ್ರಾಫಿಕ್  ಹೊಂದಿರುವ ಸಿಟಿ ಎಂಬ ವರದಿ ಈಗ ಬಹಿರಂಗವಾಗಿದೆ.

ಟಾಮ್ ಟಾಮ್ ಸಂಸ್ಥೆ ನಡೆಸಿದ ಟ್ರಾಫಿಕ್ ಇಂಡೆಕ್ಸ್‌ನಲ್ಲಿ ಭಾರತದಲ್ಲೇ ಬೆಂಗಳೂರು ಮೊದಲ ಟ್ರಾಫಿಕ್ ಸಿಟಿ ಎಂಬ ವರದಿ ಹೊರಬಿದ್ದಿದೆ. ವಿಶ್ವದ ಅತೀ ಹೆಚ್ಚು ದಟ್ಟನೆ ನಗರ ಎಂಬ ಕುಖ್ಯಾತಿಗೆ ಒಳಾಗಾಗಿದ್ದ, ಬೆಂಗಳೂರು ಈಗ, ದೇಶದಲ್ಲೇ ಮೊದಲ ಸ್ಥಾನ ಪಡೆದು ಮತ್ತೆ ಟ್ರಾಫಿಕ್ ವಿಚಾರವಾಗಿ ಸುದ್ದಿಯಾಗಿದೆ

ಬೆಂಗಳೂರಿನಲ್ಲಿ 10 ಕಿ.ಮೀ ಸಂಚಾರ ಮಾಡಲು 36 ನಿಮಿಷಗಳು ಬೇಕಾಗಿದೆ. ಸರಾಸರಿ ಸಮಯದ ಪ್ರಕಾರ, ನಗರದಲ್ಲಿ ಕೇವಲ 10 ಕಿಲೋಮೀಟರ್ ದೂರ ಕ್ರಮಿಸಲು ಸವಾರರು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತಾರೆ. ಬೆಂಗಳೂರಿನ ವಾಹನ ಸವಾರರು ಕೇವಲ ಪೀಕ್ ಅವರ್ಸ್ (ರಶ್ ಅವರ್) ಟ್ರಾಫಿಕ್‌ನಲ್ಲಿ ಸಿಲುಕಿ ವರ್ಷಕ್ಕೆ ಬರೋಬ್ಬರಿ 168 ಗಂಟೆಗಳನ್ನು ಅಂದರೆ ಸುಮಾರು 7 ದಿನಗಳು ರಸ್ತೆಯಲ್ಲೇ ಕಳೆಯುತ್ತಾರೆ ಅನ್ನೋ ಶಾಕಿಂಗ್ ಅಂಶ ಕೂಡ ಬಯಲಾಗಿದೆ.

ರಶ್ ಅವರ್‌ನಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ ಕೇವಲ 13.9 ಕಿ.ಮೀಗೆ ಇಳಿಯುತ್ತದೆ. ಇದು 2024ಕ್ಕೆ ಹೋಲಿಕೆ ಮಾಡಿದ್ರೆ, 2025ಕ್ಕೆ ಭಾರಿ ಏರಿಕೆಯಾಗಿದೆ. ಮುಂದನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನೂ ಬೆಂಗಳೂರು ಹೊರತು ಪಡಿಸಿ ಎರಡನೇ ಸ್ಥಾನವನ್ನು ಕೋಲ್ಕತ್ತಾ ಪಡೆದುಕೊಂಡಿದೆ. ಪುಣೆಯಲ್ಲಿ 10 ಕಿಮೀ ಸಾಗಲು 33.20 ನಿಮಿಷ ಬೇಕಾಗ್ತಿದ್ದು, ಇದರಿಂದ ಮೂರನೇ ಸ್ಥಾನ ಪಡೆದುಕೊಂಡಿದೆ. ನ್ಯಾವಿಗೇಷನ್ ಟೆಕ್ನಾಲಜಿ ಕಂಪನಿಯಾದ ಟಾಮ್ ಟಾಮ್ ವಿಶ್ವದ ಬೇರೆಬೇರೆ ನಗರಗಳ ಸಂಚಾರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಪ್ರತಿ ವರ್ಷ ಟ್ರಾಫಿಕ್ ಇಂಡೆಕ್ಸ್ ಪ್ರಕಟಿಸುತ್ತದೆ. 2025ರ ವರದಿಯಲ್ಲಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವಾಗಿದೆ ಎಂದು ವರದಿ ಬಿಡುಗಡೆ ಮಾಡಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಕಿಸ್ತಾನಿಯರೆಲ್ಲರೂ ಶತ್ರುಗಳಲ್ಲ; ಮೋಹನ್ ಭಾಗವತ್ ಹೇಳಿಕೆಗೆ RSS-ಪಾಕ್ ಲಿಂಕ್ ಬಗ್ಗೆ ತನಿಖೆಯಾಗಲಿ ಎಂದ ಹರಿಪ್ರಸಾದ್ಆಹಾರ ಸರಬರಾಜು ನಿಗಮದ ಗೋದಾಮಿನಲ್ಲೇ ವಂಚನೆ; ಅಧಿಕಾರಿ-ಸಿಬ್ಬಂದಿಯಿಂದ 86 ಲಕ್ಷ ಮೌಲ್ಯದ ಅಕ್ಕಿ, ಗೋಧಿ, ರಾಗಿ ಲೂಟಿರೈತರ ಹೊಟ್ಟೆ ಮೇಲೆ ಹೊಡೆದು ಟೌನ್‌ಶಿಪ್ ಮಾಡಬೇಡಿ – ಸರ್ಕಾರದ ವಿರುದ್ಧ ಹೆಚ್‌ಡಿಡಿ ವಾಗ್ದಾಳಿರಾಮ ಮಂದಿರದಲ್ಲಿ ಲೂಟಿ ಹೊಡೆದವರು ನಾಗೇಂದ್ರ ಬಗ್ಗೆ ಮಾತಾಡ್ತಾರೆ: ಸಂತೋಷ್ ಲಾಡ್ ಕಿಡಿಮಾಜಿ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್ಬೇರುಸಹಿತ ಮಾದಕ ವಸ್ತು ಜಾಲ ಕಿತ್ತೊಗೆಯಲು ಪೊಲೀಸರ ಸಮರ – 55.8 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, 39 ಮಂದಿ ಅರೆಸ್ಟ್ ದೇಶದಲ್ಲೇ ಫಸ್ಟ್ – ಬೆಂಗಳೂರು ಈಗ ಟಾಪ್-1 ಟ್ರಾಫಿಕ್ ಸಿಟಿಕರ್ನಾಟಕದಿಂದ 4.5 TMC ಕಾವೇರಿ ನೀರು ಬಿಡುಗಡೆಗೆ ಆಗ್ರಹ: ಗುರುವಾರ ಸುಪ್ರೀಂನಲ್ಲಿ ತಮಿಳುನಾಡು ಅರ್ಜಿ ವಿಚಾರಣೆರೈತರ ಜಮೀನು ಕಬಳಿಸಲು ಪೆನ್ನು, ಪೇಪರ್ ಬಳಸ್ತಿದ್ದೀರಾ?: ಸಿಎಂ ವಿರುದ್ಧ ನಿಖಿಲ್ ವಾಗ್ದಾಳಿಬಸ್ ಸೌಲಭ್ಯಕ್ಕೆ ಆಗ್ರಹ| ಹುಬ್ಬಳ್ಳಿ-ವಿಜಯಪುರ ಹೆದ್ದಾರಿ ತಡೆದು ಯಡಹಳ್ಳಿ ವಿದ್ಯಾರ್ಥಿಗಳ ಆಕ್ರೋಶ