LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫಿಫಾ ವಿಶ್ವಕಪ್‌ 3ನೇ ಟ್ರೋಫಿ ಕನಸು ಭಗ್ನ – ಅಭಿಮಾನಿಗಳ ಆಕ್ರೋಶಕ್ಕೆ ಹೊತ್ತಿ ಉರಿದ ಫ್ರಾನ್ಸ್‌

Advertisement
Advertisement

ಪ್ಯಾರಿಸ್: ಫಿಫಾ ವಿಶ್ವಕಪ್‌ ಮೂರನೇ ಟ್ರೋಫಿ ಎತ್ತಿಹಿಡಿಯುವ ಫ್ರಾನ್ಸ್‌  ಕನಸು ಭಗ್ನವಾಗಿದೆ. ಮಂಗಳವಾರ ಮಧ್ಯರಾತ್ರಿ ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ ಎಟಿ & ಟಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್‌ ಸೆಮಿಫೈನಲ್‌ನಲ್ಲಿ ಸ್ಪೇನ್ (Spain) ವಿರುದ್ಧ 2-0 ಅಂತರದಿಂದ ಫ್ರಾನ್ಸ್‌ ಸೋತು 2026 ರ ಟೂರ್ನಿಯಿಂದ ಹೊರಬಿದ್ದಿತು. ಸೋಲಿನ ನಂತರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದಂತೆ ಫ್ರಾನ್ಸ್‌ನಲ್ಲಿ ಗಲಭೆಗಳು ಭುಗಿಲೆದ್ದಿವೆ.

ಸೆಮಿಫೈನಲ್‌ ಪಂದ್ಯದಲ್ಲಿ ಸೋತು ಫ್ರಾನ್ಸ್‌ ತನ್ನ ಅಭಿಯಾನವನ್ನು ಕೊನೆಗೊಳಿಸಿತು. ಪಂದ್ಯದಲ್ಲಿ ಸಮಚಿತ್ತದಿಂದ ಆಡಿದ ಸ್ಪೇನ್ 2026 ರ FIFA ವಿಶ್ವಕಪ್ ಫೈನಲ್‌ಗೇರಿತು. ಕೈಲಿಯನ್ ಎಂಬಾಪೆಯಂತಹ  ಆಕ್ರಮಣಕಾರಿ ಆಟಗಾರರ ಹೊರತಾಗಿಯೂ ಸ್ಪಷ್ಟ ಅವಕಾಶಗಳನ್ನು ಸೃಷ್ಟಿಸಲು ಹೆಣಗಾಡಿದ ಡಿಡಿಯರ್ ಡೆಸ್ಚಾಂಪ್ಸ್ ತಂಡವು ನಿರಾಸೆ ಅನುಭವಿಸಿತು. ಸ್ಪೇನ್‌ ತಂಡ ಎರಡು ಗೋಲುಗಳನ್ನು ಗಳಿಸಿ 2-0 ಜಯ ಸಾಧಿಸಿತು. 

ದೇಶಕ್ಕೆ ಮೂರನೇ ವಿಶ್ವಕಪ್‌ ಕೈತಪ್ಪಿತು ಎಂದು ಆಕ್ರೋಶಭರಿತರಾದ ಫುಟ್‌ಬಾಲ್‌ ಫ್ಯಾನ್ಸ್‌ ಬೀದಿಗಿಳಿದು ಹಿಂಸಾಚಾರ ನಡೆಸಿದ್ದಾರೆ. ಫ್ರೆಂಚ್ ರಾಜಧಾನಿಯ ಕೆಲವು ಭಾಗಗಳಲ್ಲಿ ಗಲಭೆಗಳು ನಡೆದವು. ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿಹಚ್ಚಿದ್ದಾರೆ. ಈ ವೇಳೆ ಗಲಭೆ ನಿಯಂತ್ರಣಕ್ಕೆ ಮುಂದಾದ ಪೊಲೀಸರ ಜೊತೆಯೂ ಫ್ಯಾನ್ಸ್‌ ಘರ್ಷಣೆ ಮಾಡಿಕೊಂಡಿದ್ದಾರೆ. ಹಿಂಸಾಚಾರದ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಫ್ರಾನ್ಸ್‌ನ ಆಕ್ರಮಣಕಾರಿ ಒಗ್ಗಟ್ಟಿನ ಕೊರತೆ, ಕೈಲಿಯನ್‌ ಎಂಬಾಪೆ ದುರ್ಬಲ ಪ್ರದರ್ಶನ, ಪ್ರಥಮಾರ್ಧದಲ್ಲಿ ಬಿಟ್ಟುಕೊಟ್ಟ ಪೆನಾಲ್ಟಿಯಿಂದಾಗಿ ಸೆಮಿಫೈನಲ್‌ನಲ್ಲಿ ಸ್ಪೇನ್‌ ಗೆಲುವು ದಾಖಲಿಸಿತು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಲಮಟ್ಟಿ ಡ್ಯಾಂನಿಂದ ಕೆರೆಗಳಿಗೆ ನೀರು ಹರಿಸಿ – ಸಿಎಂ ಡಿಕೆಶಿಗೆ ಮಾಜಿ ಸಚಿವ ಶಿವಾನಂದ ಪಾಟೀಲ್ ಮನವಿಬಿಡದಿ ಟೌನ್‌ಶಿಪ್‌ ಯೋಜನೆಗೆ 2 ತಿಂಗಳು ತಾತ್ಕಾಲಿಕ ಬ್ರೇಕ್‌ – ಸಮಿತಿ ರಚಿಸುತ್ತೇನೆ ಎಂದ ಸಿಎಂಬೆಳಗಾವಿಯಲ್ಲಿ 165 ಕೋಟಿ ವಂಚಿಸಿ ವಿದೇಶಕ್ಕೆ ಪರಾರಿತ್ರಿವಳಿ ಕೊಲೆ ಕೇಸ್ – ಬ್ರೈನ್ ಮ್ಯಾಪಿಂಗ್ ಮುನ್ನವೇ ಮೂವರನ್ನು ಕೊಂದಿದ್ದು ನಾನೇ: ತಪ್ಪೊಪ್ಪಿಕೊಂಡ ಆರೋಪಿಕಿಟಕಿ ರಾಡ್ ಮುರಿದು, ಬಟ್ಟೆಯನ್ನೇ ಹಗ್ಗ ಮಾಡಿ ಗೋಡೆ ಹಾರಿದ್ರು – ಕಲಬುರಗಿ ಜೈಲಿನಿಂದ ಸಿನಿಮಾ ಶೈಲಿ ಕೈದಿಗಳು ಎಸ್ಕೇಪ್ರಾಜ್ಯದಲ್ಲಿ ಮತ್ತೆ ಹೆಚ್ಚಿದ ಕೊರೋನಾ ಭೀತಿ – 32 ಜನರಲ್ಲಿ ಸೋಂಕು ದೃಢರಾಮಭಕ್ತರ ಮೇಲೆ ಗುಂಡು ಹಾರಿಸಿದವರಿಂದ ಇಂದು ಉಪದೇಶ- ಎಸ್‌ಪಿ ವಿರುದ್ಧ ಯೋಗಿ ಕಿಡಿNDA ಸೇರ್ಪಡೆಯಾಗದೇ ಮಹಿಳಾ ಮೀಸಲಾತಿ, ಡಿಲಿಮಿಟೇಷನ್‌ ಮಸೂದೆಗೆ ಪವಾರ್ ಬಣ ಬೆಂಬಲ!ಫಿಫಾ ವಿಶ್ವಕಪ್‌ 3ನೇ ಟ್ರೋಫಿ ಕನಸು ಭಗ್ನ – ಅಭಿಮಾನಿಗಳ ಆಕ್ರೋಶಕ್ಕೆ ಹೊತ್ತಿ ಉರಿದ ಫ್ರಾನ್ಸ್‌5 ನಿವೇಶನ, 4 ಫ್ಲಾಟ್‌, ಕಂತೆ ಕಂತೆ ನೋಟು, ಚಿನ್ನಾಭರಣ; 100 ಕೋಟಿ ಆಸ್ತಿ ಪತ್ತೆ – ಎಂಜಿನಿಯರ್‌ ಅರೆಸ್ಟ್‌