LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಕಾರಾತ್ಮಕ ಚಿಂತನೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ

ಇಟಗಿ: ಪರಸ್ಪರ ಸಹಕಾರ ಮತ್ತು ಸಕಾರಾತ್ಮಕ ಚಿಂತನೆಯಿAದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
 
ಅವರೊಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು, ಭೂ ದಾನಿಗಳು ಹಾಗೂ ಜನಪ್ರತಿನಿಽಗಳ ಸಹಕಾರದೊಂದಿಗೆ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪದ ಚೌಕಟ್ಟು ಪೂಜಾ ಸಮಾರಂಭದಲ್ಲಿ ಮಾತನಾಡಿ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂ ದಾನ ಮಾಡಿದ ಭೀಮರಾವ ಕುಲಕರ್ಣಿ ಹಾಗೂ ಸಾವಿತ್ರಿಬಾಯಿ ಕುಲಕರ್ಣಿ ಸೇವೆ ಸ್ಮರಣೀಯ. ವೈಯಕ್ತಿಕವಾಗಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲಿ ಹಣ ಬಿಡುಗಡೆ ಹಾಗೂ ವಿವಿಧ ಜನಪ್ರತಿನಿಽಗಳ ಅನುದಾನದಲ್ಲಿ ನಿರ್ಮಾಣ ಕಾರ್ಯಕ್ಕೆ ಸಹಕರಿಸುವುದಾಗಿ ಹೇಳಿದರು.
 
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಪ್ರಮೋದ ಕೋಚೇರಿ ಮಾತನಾಡಿ, ಗ್ರಾಮಸ್ಥರೆಲ್ಲರೂ ಸೇರಿ ಕಲ್ಯಾಣ ಮಂಟಪ ನಿರ್ಮಾಣ ಕೈಗೊಂಡಿದ್ದು ಗ್ರಾಮದ ಏಕತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಜನತೆಯ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದರು. 
 
ಬಿಜೆಪಿ ಮುಖಂಡ ಬಸವರಾಜ ಸಾಣಿಕೊಪ್ಪ ಮಾತನಾಡಿದರು. ಮಲಗೌಡ ಪಾಟೀಲ, ರುದ್ರಪ್ಪ ಶಿವಪ್ಪನವರ, ವಿಠ್ಠಲ ಭರಮಪ್ಪನವರ, ವಕೀಲ ಆರ್.ಎನ್.ಪಾಟೀಲ, ಕಲ್ಲಪ್ಪ ಎಮ್ಮೋಜಿ, ಯಶವಂತ ಕೊಡೊಳ್ಳಿ, ಶೇಖರ ಕೊಡೊಳ್ಳಿ, ನಾಗಭೂಷಣ ಪಾಟೀಲ, ಬಿ.ಎಸ್.ನಾಗನ್ನವರ, ಸಹದೇವ ಬಡಿಗೇರ, ಯು.ಜಿ.ಮಾಯಪ್ಪನವರ, ಮಂಜುನಾಥ ಕೊಲೆಕರ ಇತರರಿದ್ದರು.
Advertisement

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಕಾರಾತ್ಮಕ ಚಿಂತನೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯಕನಿಷ್ಠ ವೇತನ ಹೆಚ್ಚುವರಿ ಆದೇಶ ವಾಪಸ್ಸು ಪಡೆಯಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿಬೀದಿ ವ್ಯಾಪಾರಿಗಳ ಭೂಬಾಡಿಗೆ ಜಿಲ್ಲಾಧಿಖಾರಿ ಕಚೇರಿ ಎದುರು ಪ್ರತಿಭಟನೆಬೆಳಗಾವಿ : ಆರು ವರ್ಷಗಳಿಂದ ಕಾಣೆಯಾದಾತ ಗುಜರಾತನಲ್ಲಿ ಪತ್ತೆಹ್ಯಾಟ್ರಿಕ್ ತಪ್ಪು, ಮುಂದಿನ ಸೀಸನ್‌ನ ಮೊದಲ ಪಂದ್ಯಕ್ಕೆ ಟಿಮ್ ಡೇವಿಡ್ ಬ್ಯಾನ್!ಕರಾವಳಿಯಲ್ಲಿ ಜೂ.3 ರಿಂದ 5ರ ವರೆಗೆ ಭಾರೀ ಮಳೆ ಮುನ್ಸೂಚನೆ – ಯೆಲ್ಲೋ ಅಲರ್ಟ್‌ ಘೋಷಣೆಭವಿಷ್ಯದ ತಂತ್ರಜ್ಞಾನ ಕಲಿಕೆಗೆ ಹೊಸ ದಾರಿ; ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅವಕಾಶ ಎಂದ ಡಿಸಿ ಮೊಹಮ್ಮದ್ ರೋಶನ್ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಕೋರಿದ ಡಾ.ಪ್ರಭಾಕರ ಕೋರೆನಿಗದಿತ ಅವಧಿಯಲ್ಲಿ ಎಸ್ಐಆರ್ ಪೂರ್ಣಗೊಳಿಸಿ: ಪಾಲಿಕೆ ಆಯುಕ್ತ ಕಾರ್ತಿಕ್ ಎಂಸತೀಶ್ ಜಾರಕಿಹೊಳಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿ: ದರ್ಗಾದಲ್ಲಿ ಪ್ರಾರ್ಥನೆ