LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ನಟ – ನಟಿಯರು ಭಾಗಿ

Advertisement

ಮೈಸೂರು: ಈ ಬಾರಿಯ ದಸರಾ ಮೆರವಣಿಗೆಯಲ್ಲಿ  ಕನ್ನಡ ಚಲನಚಿತ್ರ ರಂಗದ ನಟ ನಟಿಯರು  ಭಾಗಿಯಾಗಲಿದ್ದಾರೆ. ಸಿಎಂ ಆಶಯದಂತೆ ಈ ಬಾರಿ ಮೆರವಣಿಗೆಯಲ್ಲಿ ನಟ ನಟಿಯರು ಸಾಗಲಿದ್ದಾರೆ.

ಜಂಬೂ ಸವಾರಿಯ ದಿನ ಅಂಬಾರಿ ಬಸ್‌ನಲ್ಲಿ ಅರಮನೆ ಆವರಣದಿಂದ ಕೆಆರ್ ಸರ್ಕಲ್‌ವರೆಗೆ ಮೆರವಣಿಗೆ ಮೂಲಕ ನಟ ನಟಿಯರು ಸಾಗಲಿದ್ದಾರೆ. ನಂತರ ಕಲಾವಿದರನ್ನು ಕೆಆರ್ ಸರ್ಕಲ್‌ನಿಂದ ಕರೆದುಕೊಂಡು ಬಂದು ಅರಮನೆ ಗ್ಯಾಲರಿಯಲ್ಲಿ ಬಿಡಲಾಗುವುದು ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ. 

ಆನೆಗಳ ತಾಲೀಮು ನೋಡಲು ದಿನವೂ ಜನಸಾಗರ:
ಮೈಸೂರು ದಸರಾ ಹಿನ್ನೆಲೆ ಗಜಪಡೆ ವೀಕ್ಷಣೆಗೆ ಜನಸಾಗರವೇ ಸೇರುತ್ತಿದೆ. ಗಜಪಡೆ ತಾಲೀಮು ನೋಡಲು ದಿನ ದಿನಕ್ಕೂ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಆನೆಗಳ ಬಳಿ ಸೆಲ್ಫಿ, ವೀಡಿಯೋ ಮಾಡುವ ಹುಚ್ಚಾಟವು ನಡೆದಿದೆ. ಆನೆಗಳನ್ನು ಕಣ್ಣು ತುಂಬಿಕೊಳ್ಳುವ ಜೊತೆಗೆ ಆನೆಗಳ ಜೊತೆ ಸೆಲ್ಫಿ, ವಿಡಿಯೋಗೆ ಜನ ಮುಗಿ ಬೀಳುತ್ತಿರುವುದು ಆನೆ ಮಾವುತರು ಹಾಗೂ ಕಾವಾಡಿಗಳಿಗೆ ದೊಡ್ಡ ತಲೆ ನೋವಾಗಿದೆ. 

ಜನರನ್ನ ನಿಯಂತ್ರಿಸಲು ಪೊಲೀಸರು ದಿನವೂ ಹರಸಾಹಸ ಪಡುತ್ತಿದ್ದಾರೆ. ಜನರನ್ನು ನಿಯಂತ್ರಣ ಮಾಡಲು ಬ್ಯಾರಿಕೇಡ್ ಕಟ್ಟಿದ್ದರು ಕೂಡ ಬ್ಯಾರಿಕೇಡ್ ದಾಟಿ ಆನೆಗಳ ಸಮೀಪ ಜನರು ಬರುತ್ತಿದ್ದಾರೆ. ಜಂಬೂ ಸವಾರಿ ಮೆರವಣಿಗೆಗೆ ಸೇರುವ ರೀತಿಯಲ್ಲೇ ದಿನವೂ ಜನರು ಜಮಾಯಿಸುತ್ತಿರುವುದು ಆನೆಗಳ ತಾಲೀಮಿಗೆ ತ್ರಾಸದಾಯಕವಾಗಿದೆ. 

ಇನ್ನು ಮೈಸೂರು ದಸರಾ ಗಜಪಡೆಯ ತಾಲೀಮು ಅನ್ನು ನಟಿ ಅಮೂಲ್ಯ ತಮ್ಮ ಮಕ್ಕಳ ಜೊತೆ ನಿಂತು ವೀಕ್ಷಿಸಿದ್ದಾರೆ. ಜನರ ಗುಂಪಿನ ನಡುವೆಯೂ ತಮ್ಮ ಮಕ್ಕಳನ್ನು ನಿಲ್ಲಿಸಿಕೊಂಡು ಆನೆಗಳ ವೀಕ್ಷಣೆ ಮಾಡಿದ್ದಾರೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೀಡಿಯೋ ವೈರಲ್ ಬಳಿಕ ತಂದೆ, ಸಹೋದರನಿಂದ ಯುವತಿಯ `ಮರ್ಯಾದಾ ಹತ್ಯೆ’ – ಅಪಘಾತದಂತೆ ಬಿಂಬಿಸಲು ಯತ್ನಬಯಲುಸೀಮೆಯ ಬಹುದಿನದ ಕನಸು ನನಸು – ಕೋಟೆ ನಾಡು ಪ್ರವೇಶಿಸಿದ ಭದ್ರಾ ನೀರುರಾಜ್ಯದ ವಿಜ್ಞಾನ ಕೇಂದ್ರಗಳಲ್ಲಿ ‘ವಿದ್ಯಾರ್ಥಿ–ವಿಜ್ಞಾನಿ ಸಂವಾದ’ಕ್ಕೆ ಇಸ್ರೋ ಸಹಕಾರ ಕೋರಿದ ಸಚಿವ ಅಜಯ್ ಸಿಂಗ್ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ನಟ – ನಟಿಯರು ಭಾಗಿಭಾರತ ರತ್ನ ಪ್ರೊ. ಸಿಎನ್‌ಆರ್‌ ರಾವ್‌ಗೆ ಎಸ್‌ಐಆರ್ ನೋಟಿಸ್ ಜಾರಿ ಮಾಡಿಲ್ಲ: ಜಿಬಿಎ ಸ್ಪಷ್ಟನೆ`ದೃಢ ಕರ್ನಾಟಕದ ಸಂಕಲ್ಪ’: ಸರ್ಕಾರದ 100 ದಿನಗಳ ಯಶಸ್ವಿ ಆಡಳಿತ; ವಿಧಾನಸೌಧದಲ್ಲಿ `ಶತಕದ ಪಥ, ಪ್ರಗತಿಯ ರಥ’ ವಿಶೇಷ ಕಾರ್ಯಕ್ರಮಮಂತ್ರಾಲಯ ರಾಯರ ಮಠದಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರಹ – 16 ದಿನದಲ್ಲಿ 3.30 ಕೋಟಿ ರೂ. ಕಾಣಿಕೆ ನೀಡಿದ ಭಕ್ತರುತನಿಖಾ ಸಂಸ್ಥೆಗಳಿಂದ ಇನ್ನಷ್ಟು ಕ್ರಮ ಆಗೋ ಸಾಧ್ಯತೆ – ಎಲ್ಲ ಶಾಸಕರು, ಸಚಿವರಿಗೆ ಎಚ್ಚರಿಕೆ ನೀಡಿದ್ದೇನೆ: ಡಿಕೆಶಿಕರ್ನಾಟಕದ ರೈಲು ಜಾಲಕ್ಕೆ ಹೊಸ ಬಲ – 10 ಸಾವಿರ ಕೋಟಿ ಮೊತ್ತದ ಎರಡು ರೈಲ್ವೆ ಯೋಜನೆಗಳಿಗೆ ಕೇಂದ್ರ ಅನುಮೋದನೆಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ: ಬಹುಭಾಷಾ ತಾರೆಯರ ಸಮಾಗಮ