ಇಂದು ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಲಿರುವ ಸಿಎಂ

Apr 25, 2024 - 09:22
 56
Google  News Join WhatsApp Join Telegram View ePaper

ಇಂದು ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಲಿರುವ ಸಿಎಂ

Panchayat Swaraj Samachar News Desk.

ಹುಬ್ಬಳ್ಳಿ: ಹತ್ಯೆತಾದ ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿಲಿದ್ದಾರೆ.

ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಇವತ್ತು ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಪ್ರಚಾರಕ್ಕೂ ಮುನ್ನ, ಕೊಲೆಯಾದ ನೇಹಾ ಮನೆಗೆ ಭೇಟಿ ನೀಡಿ, ನಿರಂಜನ್ ಹಿರೇಮಠ್ ಅವರಿಗೆ ಧೈರ್ಯ ತುಂಬಲಿದ್ದಾರೆ. ಈ ಮೂಲಕ ಬಿಜೆಪಿ ನಾಯಕರ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಬ್ರೇಕ್ ಹಾಕಲಿದ್ದಾರೆ. ಹಾಗೂ ಸರ್ಕಾರ ನಿಮ್ಮ ಜೊತೆ ಇರಲಿದೆ ಎಂಬ ಸಂದೇಶವನ್ನು ಸಾರಲಿದ್ದಾರೆ.

ಬಿಜೆಪಿಯ ಘಟಾನುಘಟಿ ನಾಯಕರು, ನಿರಂಜನ್ ಹಿರೇಮಠ್ ಮನೆಗೆ ತೆರಳಿ, ಸಾಂತ್ವನ ಹೇಳಿದ್ದರು. ತಮ್ಮ ಪಕ್ಷದ ಕಾರ್ಪೊರೇಟರ್ ಪುತ್ರಿಯೇ ಅನ್ಯಕೋಮಿನ ಯುವಕನಿಂದ ಬಲಿಯಾಗಿದ್ರೂ ಸಿಎಂ, ಆಗಲಿ ಸಿಎಂ ಆಗಲಿ ಸಾಂತ್ವನ ಹೇಳಲು ಮುಂದಾಗಿರಲಿಲ್ಲ. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಖುದ್ದು ನಿರಂಜನ್ ಹಿರೇಮಠ್ ಅವರೇ ಬೇಸರ ಹೊರಹಾಕಿದ್ರು. 

Google News Join Facebook Live 24/7 Help Desk

Tags: