Ad imageAd image

ನಾನು ಸಿಎಂ ಆದ್ರೆ ಪಾಕಿಸ್ತಾನ ಜಿಂದಾಬಾದ್ ಎನ್ನುವ ಮೊದಲೇ ಗುಂಡು ಹಾಕ್ತೀನಿ: ಯತ್ನಾಳ್

ratnakar
ನಾನು ಸಿಎಂ ಆದ್ರೆ ಪಾಕಿಸ್ತಾನ ಜಿಂದಾಬಾದ್ ಎನ್ನುವ ಮೊದಲೇ ಗುಂಡು ಹಾಕ್ತೀನಿ: ಯತ್ನಾಳ್
WhatsApp Group Join Now
Telegram Group Join Now

ಬೆಳಗಾವಿ: ನಾನು ಮುಖ್ಯಮಂತ್ರಿ ಆದರೆ ಪೊಲೀಸರಿಗೆ AK47 ಗನ್​ ಬಳಕೆಗೆ​​ ಅನುಮತಿ ನೀಡುವೆ. ಪಾಕಿಸ್ತಾನ ಜಿಂದಾಬಾದ್ ಎನ್ನುವ ಮೊದಲೇ ಫೈರಿಂಗ್ ಮಾಡುತ್ತೇವೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basangouda Patil Yatnal)​ ಹೇಳಿದ್ದಾರೆ. ಬೈಲಹೊಂಗಲದಲ್ಲಿ ನಡೆದ ಗಣೇಶ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕೈಗೆ ಅಧಿಕಾರ ಕೊಡಿ, ಅಲ್ಲಿ ಯೋಗಿ, ಇಲ್ಲಿ ನಾವು ಇರುತ್ತೇವೆ ಎಂದರು.

ಮುಂದಿನ ಬಾರಿ ನಮ್ಮ ಸರ್ಕಾರ ಬಂದಾಗ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಒಂದೇ ಒಂದು ಕಲ್ಲು ಬಿದ್ದರೂ ಸೀದಾ ಜನ್ನತ್​​. ಪ್ರಧಾನಿ ಮೋದಿಯವರು ಸಬ್​​ ಕಾ ಸಾಥ್​​, ಸಬ್​ ಕಾ ವಿಕಾಸ್​, ಸಬ್​ ಕಾ ಪ್ರಯಾಸ್​​ ಎಂದು ಹೇಳುತ್ತಾರೆ. ಆದರೆ ನಮ್ಮ ಮಾತು ಬದಲಾಗುತ್ತದೆ. ಹಿಂದೂವೋಂಕೆ ಸಾಥ್,​ ಹಿಂದೂವೋಂಕೆ ವಿಕಾಸ್,​​ ದೇಶ ದ್ರೋಹಿಯೋಂಕೋ ಲಾಥ್ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಅಗ್ನಿವೀರರನ್ನು ತಯಾರು ಮಾಡುತ್ತಿದ್ದಾರೆ. ನಾಲ್ಕು ವರ್ಷ ಆದಮೇಲೆ ನಮ್ಮ ಊರುಗಳಿಗೆ ವಾಪಸ್ ಬರುತ್ತಾರೆ. ನಾನು ಸಿಎಂ ಆದರೆ ನಿವೃತ್ತ ಅಗ್ನಿವೀರರಿಗೆ 25 ಲಕ್ಷ ಹಣ ನೀಡುವೆ. ನೀವೆಲ್ಲ ಗಟ್ಟಿಯಾಗಿರಿ ಕರ್ನಾಟಕದಲ್ಲಿ ಹಿಂದೂ ರಾಜ್ಯ ತರೋಣ. ಶಿವಾಜಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮರಂತೆ ಆಡಳಿತ ಮಾಡೋಣ. ಸಾಯೋದು ಅಂತು ಪಕ್ಕಾ, ನಾಲ್ಕು ಹೊಡದೇ ಹೋಗುತ್ತೇನೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದರು.

ಸಿಎಂ ಸಿದ್ದರಾಮಯ್ಯ ಕುಂಕುಮ ಹಚ್ಚಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಸಿದ್ದರಾಮಯ್ಯ ತಲೆಗೆ ಪೇಟ ಇಟ್ಟರೆ ಕಿತ್ತು ಹಾಕುತ್ತಿದ್ದರು. ಸಿದ್ದರಾಮಯ್ಯನವರೆ ಈಗ ಯಾಕೆ ಚಾಮುಂಡಿ ದರ್ಶನಕ್ಕೆ ಹೋಗುತ್ತೀರಿ? ಸಿದ್ದರಾಮಯ್ಯ ಹಿಂದೂ ದೇವಸ್ಥಾನದಲ್ಲಿ ಪಡೆಯುತ್ತಾರೆ, ಆದರೆ ಮುಸ್ಲಿಮರ ಪರ ಕೆಲಸ ಮಾಡುತ್ತಾರೆ. ಎಸ್​ಟಿ, ಎಸ್​​ಸಿ ಸಮುದಾಯದ ಹಣ ನುಂಗಿದ್ದೀರಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನುಂಗಿ ನೀರು ಕುಡಿದ್ರಿ. ಹಾಲುಮತದ ಸಮುದಾಯಕ್ಕೆ ಈವರೆಗೂ ಏನೂ ಮಾಡಿಲ್ಲ. ಆದರೆ ಮುಸ್ಲಿಮರಿಗೆ 10 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳುತ್ತಾರೆ. ಯಾರ ಅಪ್ಪನ ಮನೆಯಿಂದ ಹಣ ಕೊಡುತ್ತೀರಿ ಎಂದು ಪ್ರಶ್ನಿಸಿದರು.

 

WhatsApp Group Join Now
Telegram Group Join Now
Share This Article