ಶ್ರಾವಣ ಮಾಸದ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಶ್ರೀ ರುದ್ರಾಕ್ಷಿ ಮಠ ನಾಗನೂರು ಬೆಳಗಾವಿ ಇವರ ಆಶ್ರಯದಲ್ಲಿ, ಬೆಳಗಾವಿ ಮಹಾನಗರ ಹಾಗೂ ಸುತ್ತು ಮುತ್ತಲಿನ ಗ್ರಾಮಗಳಲ್ಲಿ, ಜನಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ದಿ.09.09.2023 ರಂದು ಕುವೆಂಪುನಗರದ ಬಸವೇಶ್ವರ ಬಡಾವಣೆಯಲ್ಲಿ, ಪರಮಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ *ಜನಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬಸವೇಶ್ವರ ಬಡಾವಣೆಯ ಭಕ್ತರು ಎಲ್ಲ ಮಾರ್ಗಗಳನ್ನು ರಂಗೋಲಿ ಹಾಗೂ ತಳಿರು ತೋರಣಗಳಿಂದ ಅಲಂಕಾರ ಮಾಡಿ ಶ್ರೀಗಳಿಗೆ ಭವ್ಯ ಸ್ವಾಗತವನ್ನು ನೀಡಿದರು. ಪಾದಯಾತ್ರೆಯು ಬಡಾವಣೆಯ ವಿವಿಧ ಮಾರ್ಗಗಳಲ್ಲಿ ಸಾವಿರಾರು ಭಕ್ತರೊಂದಿಗೆ ಸಂಚರಿಸಿ, ಶಿವಳ್ಳಿಯವರ ನಿವಾಸದಲ್ಲಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಬಸವೇಶ್ವರ ಬಡಾವಣೆಯ ನಿಯೋಜಿತ ಉದ್ಯಾನದಲ್ಲಿ ಸಸಿ ನೆಟ್ಟು ವನಮಹೋತ್ಸವದ ಬಗ್ಗೆ ಅರಿವು ಮೂಡಿಸಿದರು.
ಸಮಾರೋಪ ಸಮಾರಂಭದಲ್ಲಿ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅವರು ಆಶೀರ್ವಚನವನ್ನು ನೀಡಿ, ಸಮಾಜದ ಎಲ್ಲ ಬಾಂಧವರು ಸಂಸ್ಕಾರವಂತರಾಗಿ ಶರಣರ ತತ್ವಗಳನ್ನು, ಆದರ್ಶಗಳನ್ನು ಪಾಲಿಸಬೇಕೆಂದು ತಿಳಿಸಿದರು. ಬಸವಾದಿ ಶಿವಶರಣರ ತತ್ವ ಸಿಧ್ದಾಂತಗಳನ್ನು ಅನುಸರಿಸುವದರಿಂದ ಜೀವನಲ್ಲಿ ಯಾವದೇ ತೊಂದರೆಗಳು ಬರುವದಿಲ್ಲ ಎಂದು ಹೇಳಿದರು.
ಪಾದಯಾತ್ರೆ ಸಮಾರಂಭದಲ್ಲಿ ಪೂಜ್ಯ ಓಂ ಗುರೂಜಿ, ಪೂಜ್ಯ ಶಿವಾನಂದ ಸ್ವಾಮಿಜೀ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ನ್ಯಾಯವಾದಿ ಬಸವರಾಜ್ ರೊಟ್ಟಿ, ಖ್ಯಾತ ವೈದ್ಯರಾದ ಡಾ. ರವಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ, ಯುವ ಘಟಕದ ಸಂಚಾಲಕ ಪ್ರೆಮ ಮಲ್ಲಪ್ಪ ಚೌಗಲಾ, ಉಪಾಧ್ಯಕ್ಷರಾದ ಬೆಂಡಿಗೇರಿ, ಮೋಹನ ಗುಂಡ್ಲೂರು, C M ಬೂದಿಹಾಳ, ಅನ್ನಪೂರ್ಣ ಮಳಗಲಿ, ಅನುಷಾ ಬಶಟ್ಟಿ, ಶೋಭಾ ಶಿವಳ್ಳಿ, ದಾಕ್ಷಾಯಿಣಿ ಉಡದಾರ, ಮಹಾದೇವಿ ಹಿರೇಮಠ, ರತ್ನಾ ಬೆಣಚಮರಡಿ, ನಗರ ಸೇವಕಿ ವೀಣಾ ವಿಜಾಪುರೆ, ರಾಜಶೆಖರ ಡೋಣಿ, ಪ್ರೀತಿ ಮಠದ, S G ಸಿದ್ನಾಳ, ಶಂಕರ ಶೆಟ್ಟಿ, ಕಟ್ಟಿಮನಿ, ಮಹಿಳಾ ಮಂಡಲದ ಸದಸ್ಯರು, ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.