spot_img
spot_img
spot_img
spot_img
spot_img
spot_img
spot_img
spot_img
spot_img
21 C
Belagavi
Wednesday, September 27, 2023
spot_img

ದಿ ಮಾರ್ಕಂಡಯ್ಯ ಸಕ್ಕರೆ ಕಾರ್ಖಾನೆ ಆಡಳಿತ ಚುಕ್ಕಾಣಿ ಹಿಡಿದ ಸೇತಕರಿ ಬಚಾವ್ ಘಟ್

ದಿ ಮಾರ್ಕಂಡೇಯ ಕೋ ಆಪರೇಟಿವ್ಹ ಶುಗರ್ ಮೀಲ್ ಲಿ., ಕಾಕತಿ ಬೆಳಗಾವಿ ಆಡಳಿತ ಮಂಡಳ ಮಂಡಳಿಯ ಸಂಜೆ 4:00ಘ ಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡು 4:30 ಕ್ಕ ಮತ ಎಣಿಕೆ ಪ್ರಾರಂಭವಾಯಿತು.

ಸಕ್ಕರೆ ಕಾರ್ಖಾನೆ ಚುನಾವಣೆಯ ಒಟ್ಟು 15 ಸ್ಥಾನಗಳಿಗೆ ಮತದಾನ ನಡೆದಿತ್ತು ಅದರಲ್ಲಿ ಸಾಮಾನ್ಯ 7, ಪರಿಶಿಷ್ಟ ಜಾತಿ 1 ಪ್ರಶಿಷ್ಟ ಪಂಗಡ 1, ಹಿಂದುಳಿದ ಪ್ರವರ್ಗ ” ಎ” ಹಿಂದುಳಿದ ಪ್ರವರ್ಗ “ಬಿ”1, ಮಹಿಳಾ 2, ಸಹಕಾರ ಸಂಘ ಬಿ ವರ್ಗ 1 ಕಬ್ಬು ಬೆಳೆಗಾರರಲ್ಲದ ಸದಸ್ಯರು ಡಿ ವರ್ಗ 1ಒಟ್ಟು 15 ಸ್ಥಾನಗಳಗೆ ಫಲಿತಾಂಶ 6:00ಗೆ ಮೊದಲನೇ ಫಲಿತಾಂಶ ಸೇತಕರಿ ಸುನಿಲ್ ಮಲ್ಲಪ್ಪ ಅಷ್ಟೇ ಕರ, ಗೆಲುವು ಸಾಧಿಸಿ ಈ ಗೆಲವು ನಿರಂತರವಾಗಿ ಸೇತುಕರಿ ಬಚಾವ್ ಪ್ಯಾನೆಲಿನ ಗೆಲುವಿಗೆ ನಾಂದಿ ಹಾಡಿತು.

15 ರಲ್ಲಿ 12 ಸ್ಥಾನಗಳನ್ನು ಗೆದ್ದ ಸೇತುಕರಿ ಬಚಾವ್ ಪ್ಯಾನೆಲ್ ಆಡಳಿತ ಚುಕ್ಕಾಣಿಯನ್ನು ಹಿಡಿಯುವುದರಲ್ಲಿ ಯಶಸ್ವಿವಾತು 3 ಸ್ಥಾನಗಳಿಗೆ ಅಭಿನಾಶ್ ರಾಮ್ ಭಾವು ಪೋತದಾರ್ ಪ್ಯಾನಲ್ ಸೀಮಿತಗೊಂಡಿತು.

ಮತ ಎಣಿಕೆಯ ಪ್ರಕ್ರಿಯೆ ಮುಗಿಯುವ ಅಷ್ಟರಲ್ಲಿ ಪರಿಶಿಷ್ಟ ವರ್ಗದ ಅಭ್ಯರ್ಥಿಗಳಾದ ಪರಶುರಾಮ್ ಕೋಲಕಾರ ಹಾಗೂ ಚೇತಕುಮಾರ ಎಲ್ಲಪ್ಪ ಕಾಂಬಳೆ, ಅವರ ಮಧ್ಯೆ ತೀವ್ರ ಪೈಪೋಟಿ ನಡೆಯಿತು. ಚೇತಕ್ ಕುಮಾರ್ ಎಲ್ಲಪ್ಪ ಕಾಂಬಳೆ 660 ಮತಗಳನ್ನು ಪಡೆದರೆ ಪರಶುರಾಮ್ ಕೋಲಕಾರ ಅವರು 658 ಮತಗಳನ್ನು ಪಡೆದು ಎರಡು ಮತಗಳ ಅಂತರದಲ್ಲಿ ಚೇತ ಕುಮಾರ್ ಕಾಂಬಳೆ ವಿಜಯಶಾಲಿಯಾದರು.

ಈ ಸಂದರ್ಭದಲ್ಲಿ ಕೆಲವು ಹೊತ್ತು ಗೊಂದಲ ನಿರ್ಮಾಣವಾದಾಗ ಪರಶುರಾಮ್ ಕೋಲಾರ ಅವರು ಮತ್ತೊಮ್ಮೆ ಮತ ಏನಿಕ್ಕೆ ಮಾಡಿ ಎಂದು ಕೋರಿಕೊಂಡಾಗ ಚುನಾವಣೆ ಸಿಬ್ಬಂದಿ ಮತ ಏನಿಕ್ಕೆ ಪರಿಶೀಲನೆ ಮಾಡಿದರು.

ಆಗ ಚತಕ ಕುಮಾರ್ ಎಲ್ಲಪ್ಪ ಕಾಂಬಳೆ ಅಧಿಕೃತಕವಾಗಿ ವಿಜಯಶಾಲಿ ಎಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದರು. ಸೇತುಕರಿ ಬಚಾವ್ ಪ್ಯಾನೆಲ್ ಸದಸ್ಯರಾದ ಮಾಜಿ ಮಹಾಪೂರ ಶಿವಾಜಿ ಸುಟುಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಜಯ ಪ್ರತಿಯೊಬ್ಬ ರೈತನ ವಿಜಯವಾಗಿದೆ. ತನಜಿ ಪಾಟೀಲ್ ಹಾಗೂ ಆರ್ ಐ ಪಾಟೀಲ್ ಅವರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಹಾಗೂ ಆರ್ಥಿಕ ವಾಗಿ ಸಬಲಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸುತ್ತಾ ಅವಿನಾಶ್ ರಾಮ್ ಭಾವು ಪೋತದಾರ್ ಪ್ಯಾನಲಿನ ಚುನಾಯಿತ ಗೊಂಡ ಎಲ್ಲಾ ಸದಸ್ಯರುಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಈ ಭಾಗದ ರೈತರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಾ, ಈ ತಾಲೂಕಿನ ಸಕ್ಕರೆ ಕಾರ್ಖಾನೆಯನ್ನು ನೀವೆಲ್ಲರೂ ಸೇರಿ ಸಮೃದ್ಧಿ ಗೊಳಿಸುತ್ತೇನೆಂದು ವಿಶ್ವಾಸವಿದೆ ಅಭಿಪ್ರಾಯಪಟ್ಟರು.

Related News

ಕೆಳಮಟ್ಟದಲ್ಲಿ ನೋಡುತ್ತಿದ್ದ ಖಾತೆಯನ್ನು ಈಗ ವಿಶ್ವವೇ ನೋಡುವಂತಾಗಿದೆ – ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಣ್ಣ ಖಾತೆಯಲ್ಲ. ಈ ಮೊದಲು ಇದನ್ನು ಕೆಳಮಟ್ಟದಲ್ಲಿ ನೋಡಲಾಗುತ್ತಿತ್ತು. ಈಗ ವಿಶ್ವವೇ ನೋಡುವಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರು...

ಜಲಜೀವನ್ ಮಿಷನ್ ಯೋಜನೆಗೆ ಚನ್ನರಾಜ ಹಟ್ಟಿಹೊಳಿ ಚಾಲನೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಇವತ್ತು ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳಿಗೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆಯನ್ನು‌ ನೀಡಿದರು. ತಂದನಂತರ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -