ಬೆಳಗಾವಿ : ಅಂತರಾಷ್ಟ್ರೀಯ ಮಟ್ಟದ ಕ್ಯಾಸ್ಟ್ರೋಬಾಲ್ ಟೊರ್ನಾಮೆಂಟ್ ಆಯ್ಕೆಯಾದ ಗೋಗಟೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರ್ಥಿಕ ಪ್ರೋತ್ಸಾಹ ನೀಡಿ ಗೌರವಿಸಿದರು.
ಎಲೆ ಮರಿ ಕಾಯಿಯಂತೆ ಸಾಧನೆ ತೋರಿಸುತ್ತಿರುವ ಪ್ರತಿಭೆಗಳಿಗೆ ಹಲವು ವರ್ಷಗಳಿಂದ ಪ್ರತಿಭೆಗಳನ್ನು ಗುರುತಿಸಿ ಶಾಸಕ ಸತೀಶ್ ಜಾರಕಿಹೊಳಿ, ಅವರನ್ನು ಆರ್ಥಿಕ ಮತ್ತು ಹೆಚ್ಚಿನ ತರಬೇತಿಗಾಗಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಅದೇ ರೀತಿ ಗ್ರಾಮೀಣ ಕ್ರೀಡೆಗಳಾಗಲಿ, ವಿವಿಧ ಪ್ರತಿಭೆಗಳಿಗೆ ಸತೀಶ್ ಜಾರಕಿಹೊಳಿ ಅವರು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯನ್ನು ಸೃಷ್ಟಿ ಮಾಡಿ ಕ್ರೀಡೆ ಹಾಗೂ ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಇನ್ನು ಗೋಗಟೆ ಕಾಲೇಜಿನ ಆರು ವಿದ್ಯಾರ್ಥಿಗಳಾದ ನಮೃತಾ ಕಾಮು, ರವಿರಾಜ್ ನಾಯಕ್, ಶ್ರೇಯಾ ಗೋನಿ ಓಂಕಾರ ಗೌರವ,ಶುಭಂ ಯಾದವ್, ಅಧಿತಿ ಬಾಳಿಗ್ ರಿಗೆ ತಲ 50,000 ಗಳಂತೆ ಪ್ರೋತ್ಸಾಹ ಧನ ನೀಡಿ ಅವರ ಉಜ್ವಲ ಭವಿಷ್ಯಕ್ಕೆ ಶುಭ ಕೋರಿದ್ದಾರೆ.