Ad imageAd image

ಹೊಸ ಸಿಎಂ ವೆಲಕಮ್ ಮಾಡಲು ಸಿದ್ದರಾಗಿ : ಭವಿಷ್ಯ ನುಡಿದ ವಿಜಯೇಂದ್ರ

ratnakar
ಹೊಸ ಸಿಎಂ ವೆಲಕಮ್ ಮಾಡಲು ಸಿದ್ದರಾಗಿ : ಭವಿಷ್ಯ ನುಡಿದ ವಿಜಯೇಂದ್ರ
WhatsApp Group Join Now
Telegram Group Join Now

ಬೆಳಗಾವಿ:ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ವಿಜಯೇಂದ್ರ ಅವರು ನಡೆದ ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಚುನಾವಣಾ ಫಲಿತಾಂಶಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಅವರು ಹರಿಯಾಣದಲ್ಲಿ ಬಿಜೆಪಿ ಐತಿಹಾಸಿಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಕ್ಕಾಗಿ ಖುಷಿ ವ್ಯಕ್ತ ಪಡಿಸಿದರು.

ಹರಿಯಾಣದ ಜನರು ಮೋದಿ ಅವರ ಗ್ಯಾರಂಟಿಯ ಮೇಲೆ ಭರವಸೆ ಇಟ್ಟಿದ್ದಾರೆ ಮತ್ತು ಕಾಂಗ್ರೆಸ್‍ನನ್ನು ತಿರಸ್ಕರಿಸಿದ್ದಾರೆ. ಈ ಗೆಲುವು ಮಹಾರಾಷ್ಟ್ರದ ಚುನಾವಣೆಯಲ್ಲಿಯೂ ಬಿಜೆಪಿ ಮೇಲಾಟ ತೋರಿಸಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಜಮ್ಮುವಿನಲ್ಲಿ ಬಿಜೆಪಿ ಗೆಲುವು ಸಾಧಿಸದಿದ್ದರೂ, ಅತಿ ದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಇದು ಪಕ್ಷದ ಭವಿಷ್ಯಕ್ಕೆ ನಿಖರ ಸ್ಥಾನಮಾನ ನೀಡುತ್ತದೆ ಎಂದರು.

ಕರ್ನಾಟಕದ ಬಗ್ಗೆ ಮಾತನಾಡಿದ ವಿಜಯೇಂದ್ರರ,ಕಾಂಗ್ರೆಸ್ ಸರ್ಕಾರ ಕೋಮಾ ಸ್ಥಿತಿಯ ಲ್ಲಿದೆ ಎಂದು ತೀವ್ರವಾಗಿ ಟೀಕಿಸಿದರು. ಕರ್ನಾಟಕದಲ್ಲಿ ಯಾವುದೇ ಅಭಿವೃದ್ಧಿಯು ನಡೆಯುತ್ತಿಲ್ಲ, ಮತ್ತು ಕಾಂಗ್ರೆಸ್ ಸರ್ಕಾರವು ಬೆಂಗಳೂರಿನಲ್ಲೇ ಅಂಟಿಕೊಂಡಿದೆ, ಇತರೆ ಭಾಗಗಳಿಗೆ ಯಾವುದೇ ಗಮನ ಕೊಡುತ್ತಿಲ್ಲವೆಂದು ಆರೋಪಿಸಿದರು.

ಸಿದ್ದರಾಮಯ್ಯನವರ ಮುನ್ನೋಟ ಕಳೆದುಹೋಗಿದ್ದು, ಕಾಂಗ್ರೆಸ್‌ನ ಒಳಜಗಳದಿಂದ ಅವರ ವಿರುದ್ಧ ಇರುವ ಶಾಸಕರು ಸಿಎಂ ಸ್ಥಾನದಿಂದ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಗಳಲ್ಲಿ ಸಿಕ್ಕುಹೋಗಿದ್ದು, ನೀಡಿದ ಗ್ಯಾರಂಟಿ ಯೋಜನೆಗಳೆಲ್ಲಾ ವಿಫಲವಾಗಿವೆ ಎಂದು ವಿಜಯೇಂದ್ರ ಹೇಳಿದರು.

ಅವರು ಸಿದ್ದರಾಮಯ್ಯ ಶೀಘ್ರದಲ್ಲೇ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದ್ದು, ಬರುವ ಚಳಿಗಾಲ ಅಧಿವೇಶನದಲ್ಲಿ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿಯನ್ನು ಬರಮಾಡಿಕೊಳ್ಳಲು ಸಿದ್ಧರಾಗಿ ಎಂದು ಹೇಳಿದ್ದಾರೆ.

ಈ ಸಭೆಯಲ್ಲಿ ಅನಿಲ್ ಬೆನಕೆ, ಸಂಜಯ ಪಾಟೀಲ, ಎಂ.ಬಿ. ಜಿರಾಳಿ, ಮಹಾಂತೇಶ ಕವಟಗಿ ಮಠ, ಇರಣ್ಣ ಕಡಾದಿ, ಅಪ್ಪಾಜಿಗೋಳ, ಬಲಚಂದ್ರ ಜಾರ್ಕಿಹೊಳಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಹಾಜರಿದ್ದರು.

WhatsApp Group Join Now
Telegram Group Join Now
Share This Article