Ad imageAd image

ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ನಿಮಿತವಾಗಿ ರಕ್ತದಾನದ ಶಿಬಿರ ಆಯೋಜನೆ

ratnakar
ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ನಿಮಿತವಾಗಿ ರಕ್ತದಾನದ ಶಿಬಿರ ಆಯೋಜನೆ
WhatsApp Group Join Now
Telegram Group Join Now

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ನಿಮಿತವಾಗಿ ಬೆಳಗಾವಿ ಮಹಾನಗರ ಉತ್ತರಮಂಡಲ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಬೆಳಗಾವಿ ನಗರದ ಕನ್ನಡ ಸಾಹಿತಿ ಭವನದಲ್ಲಿ ರಕ್ತದಾನದ ಶಿಬಿರ ಆಯೋಜನೆ ಮಾಡಲಾಗಿತ್ತು ಜಿಲ್ಲಾ ಆಸ್ಪತ್ರೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತಿ ಭಾರತೀಯ ಜನತಾ ಪಕ್ಷ ಕಾರ್ಯಕರ್ತರು ರಕ್ತದಾನ ಮಾಡಿದರು .


ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರಾದ ಮುರುಘೇಂದ್ರ ಗೌಡ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ಉತ್ತರ ಮಂಡಲ ವತಿಯಿಂದ ಪ್ರಧಾನಿಯ ನರೇಂದ್ರ ಮೋದಿಯವರ ಜನುಮದಿನದ ನಿಮಿತವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ರಕ್ತದಾನ ಶಿಬಿರ 8 ರಿಂದ 15 ದಿನಗಳ ಜಿಲ್ಲಾದ್ಯಂತ ತಾಲೂಕ ಹಾಗೂ ನಗರ ಪ್ರದೇಶಗಳಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ.


ಅದರಂತೆ ಬೆಳಗಾವಿ ಉತ್ತರ ಮಂಡಲದಲ್ಲಿ ರಕ್ತದಾನ ಶಿಬಿರವನ್ನು ಮಾಡಿ ರಕ್ತದಾನ ಮಾಡಿದ್ದೇವೆ .
ಇದು ಅವಶ್ಯಕತೆ ಇದ್ದ ಜನರಿಗೆ ರಕ್ತ ಸಿಗಬೇಕು ಎಂಬು ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಸುದ್ದಿಗಾರಿಗೆ ತಿಳಿಸಿದರು.


ಸಂದರ್ಭದಲ್ಲಿ ರಾಜ್ಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾದ ಅನಿಲ ಬೆನಕೆ , ಬೆಳಗಾವಿ ಬಿಜೆಪಿ ಮಹಾನಗರ ಉಪಾಧ್ಯಕ್ಷರಾದ ದಾದಾ ಗೌಡ ಬಿರಾದರ ,
ಉತ್ತರ ಮಂಡಲದ ಅಧ್ಯಕ್ಷರಾದ ವಿಜಯ್ ಕೊಡಗನ್ನವರ್ ಭಾರತೀಯ ಜನತಾ ಪಕ್ಷದ ಮುಖಂಡರಾದ ಮುರುಘೇಂದ್ರ ಗೌಡ ಪಾಟೀಲ, ನಗರಸೇವಕರಗಳಾದ ಶ್ರೇಯಸ್ ನಾಕಾಡಿ,
ಸಂದೀಪ್ ಜಿರ್ಗಿಹಾಳ, ಹಾಗೂ ಮಹಾದೇವ್ ದರನ್ನವರ್ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು, ಪ್ರಸಾದ್ ದೇವರಮನಿ ಬಿಜೆಪಿ ಮಹಾನಗರ ಕಾರ್ಯದರ್ಶಿ, ವಿನೋದ್ ಲಂಗೋಟಿ ಉತ್ತರ ಮಂಡಲ ಪ್ರಧಾನ, ಕಾರ್ಯದರ್ಶಿ ಅಶೋಕ್ ಥೂರಾಠ
ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಮತ್ತು ವಿನಾಯಕ್ ಮುದ್ದಲಬಾವಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article