LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನನಗೆ ಕೊಟ್ರೆ ರಾಜ್ಯದ KAT, KPSC ಯನ್ನೇ ರದ್ದು ಮಾಡ್ತೇನೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

Advertisement
Advertisement

ಬೆಂಗಳೂರು: ನನಗೆ ಬಿಟ್ಟರೆ ರಾಜ್ಯದ ಕೆಎಟಿ ಮತ್ತು ಕೆಪಿಎಸ್ಸಿಯನ್ನೇ ರದ್ದು ಮಾಡುತ್ತೇನೆ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

KPSC ಅಧ್ಯಕ್ಷರ ಪುತ್ರಿಯ ಮೇಲೆ FIR ದಾಖಲು ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಕಲಿ ಆದಾಯ ಪ್ರಮಾಣ ಪತ್ರದ ದೂರು ಆಗಿದೆ. ನಿನ್ನೆ ರಾತ್ರಿ ಎಫ್‌ಐಆರ್‌ ದಾಖಲಾಗಿದೆ. ಕೆಪಿಎಸ್‌ಸಿ ಸಾಂವಿಧಾನಿಕ ಸಂಸ್ಥೆ. ಅದನ್ನ ಕಾನೂನಾತ್ಮಕವಾಗಿ ಹೇಗೆ ಟ್ಯಾಕಲ್ ಮಾಡಬಹುದು ನೋಡಬೇಕು. ಬೇಲಿನೇ ಎದ್ದು ಹೊಲ ಮೇದರೆ ಏನು ಮಾಡೋದು. ನಮ್ಮ ಕೈಯಲ್ಲಿ ಇಲ್ಲ ಇದು, ನನಗೆ ಇದನ್ನ ಬಿಟ್ಟರೆ KAT ರದ್ದು ಮಾಡ್ತೀನಿ. KPSC ಯನ್ನು ರದ್ದು ಮಾಡ್ತೀನಿ ಅಂತ ತಿಳಿಸಿದರು.

ಇದನ್ನ ಸಂವಿಧಾನಾತ್ಮಕವಾಗಿಯೇ ಮಾಡಬೇಕಾಗುತ್ತದೆ. ಹೊಸ ಕಾನೂನು ತರಬೇಕಾಗುತ್ತದೆ. ಕೆಲವರು ಮಾಡೋಕೆ ಆಗಲ್ಲ ಅಂತಾರೆ. ಕಾನೂನು ಮಾಡೋದು ನಾವು. ಶಾಸನ ಮಾಡೋದು ನಾವು, ನಾವೆಲ್ಲರು ಸೇರಿ ತೀರ್ಮಾನ ಮಾಡಿದ್ರೆ ಶುದ್ದೀಕರಣ ಮಾಡಬಹುದು. ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡೋದು ಸರಿಯಲ್ಲ ಅಂತ ತಿಳಿಸಿದರು.

ಯಾವುದೇ ನಾಯಕರು ಇಲ್ಲದೇ ಹುಬ್ಬಳ್ಳಿ – ಧಾರವಾಡದಲ್ಲಿ ಎಷ್ಟು ಯುವಕರು ಹೋರಾಟ ಮಾಡಿದ್ರಿ ಎಲ್ಲರೂ ನೋಡಿದ್ರಿ. ಇವೆಲ್ಲವನ್ನು ನಿರ್ಲಕ್ಷ್ಯ ಮಾಡಲು ಆಗೊಲ್ಲ. ನಿನ್ನೆ ಎಫ್‌ಐಆರ್‌ ದಾಖಲಾಗಿದೆ. ಕೇಸ್ ಸತ್ಯಾಸತ್ಯತೆ ಚೆಕ್ ಮಾಡಿ ಹೇಳಬೇಕಾಗುತ್ತದೆ. ದಾಖಲಾತಿ ನೋಡದೇ ಮಾತಾಡೋದು ಸರಿಯಲ್ಲ. ಸಿಎಂ ಅವರು ನೇಮಕಾತಿ ಮಾಡಬೇಕು ಅಂತ ಹೇಳಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡಲ್ಲ. ಹಿಂದೆ ಒಂದು ಕಾನೂನು ತಂದಿದ್ದೇವೆ. ಭ್ರಷ್ಟಾಚಾರ ನಿರಂತರ ಮಾಡೋದಕ್ಕೆ. ಇದಕ್ಕೆ ರೂಲ್ಸ್ ಫ್ರೇಮ್ 1 ವಾರ 10 ದಿನಗಳಲ್ಲಿ ನಾನೇ ಮಾಡ್ತೀನಿ ಎಂದರು.

ಅಧ್ಯಕ್ಷರ ಮೇಲೆ ಕ್ರಮ ರಾಜ್ಯಪಾಲರು ಮಾಡಬೇಕು. ಆದರೆ ಸುದ್ದಿ ಆಗಿರೋದು ನಕಲಿ ಆದಾಯ ಪ್ರಮಾಣ ಪತ್ರ ನಮ್ಮ ವ್ಯಾಪ್ತಿಗೆ ಬರುತ್ತದೆ. ರಾಜ್ಯಪಾಲರು ಏನ್ ಮಾಡ್ತಾರೋ ನೋಡೋಣ. ದಾಖಲಾತಿ ಕೊಡೋದು ನಮ್ಮ ಕೆಲಸ ಕೊಡ್ತೀವಿ. ಅನುಮಾನ ಇದ್ದಾಗ ಆಯೋಗ ಸರಿ ಮಾಡಬೇಕು. ನಾವು ಸಲಹೆ ಕೊಡಬಹುದು. ಈಗ ಆಯೋಗವೇ ಸರಿ ಮಾಡಬೇಕು. ಸದಸ್ಯರೇ ಇದನ್ನ ಮಾಡಿರೋದು. ಅಲ್ಲಿ ಹೊಂದಾಣಿಕೆ, ಪಾರದರ್ಶಕತೆ ಇಲ್ಲ ಅಂತ ಗೊತ್ತಾಗಿದೆ. ಮೋಸ ಇದೆ ಅಂತ ಗೊತ್ತಾಗಿದೆ. ಇದು ಯಾವುದೇ ಸರ್ಕಾರಕ್ಕೆ ಒಳ್ಳೆಯದಲ್ಲ. ಕೇರಳಾದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಮುಂದೆ ಏನ್ ಮಾಡೋಣ ಅಂತ ನೋಡೋಣ ಅಂತ ತಿಳಿಸಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ – KPSC ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಹಣ ವಸೂಲಿ ಆರೋಪ – ಕಾಸು ಕೊಟ್ರೆ ತಪಾಸಣೆಯೆ ಇಲ್ವಂತೆ!ಸ್ಟಾಕ್‌ ಮಾರ್ಕೆಟ್‌ನಲ್ಲಿ ಲಾಸ್‌ – ಗುಂಡು ಹಾರಿಸಿಕೊಂಡು ಕೊಡಗಿನ ಯುವಕ ಆತ್ಮಹತ್ಯೆಶಾಶ್ವತ ನಿವಾಸ ಪ್ರಮಾಣಪತ್ರ ರಾಜ್ಯ ಸರ್ಕಾರ ಯಾಕೆ ಕೊಡಬಾರದು – ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆತನ್ನ ಪರ ತೀರ್ಪು ಕೊಡಲಿ ಅಂತ ಮಹಿಳಾ ನ್ಯಾಯಾಧೀಶರ ಚೇರ್‌ಗೆ ಮಾಟಮಂತ್ರ – ಮಹಿಳೆ ಬಂಧನಬಸ್​​ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ವಿಕೃತಿ – ಕಂಡಕ್ಟರ್ ಇರ್ಫಾನ್ ಅರೆಸ್ಟ್‌ಬೆಂಗಳೂರಿನಲ್ಲಿ ಮತ್ತೆ ತ್ರಿವಳಿ ಕೊಲೆ – ತಾಯಿ, ಅಜ್ಜಿ, ಮಾವನನ್ನು ಕೊಂದು ಪರಾರಿಯಾಗಬೇಕಿದ್ದವ ಸೂಸೈಡ್‌ಪ್ರಶಾಂತ್ ಕಿಶೋರ್ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯನ್ನು ಬಿಜೆಪಿ ದಿಢೀರ್‌ ಬದಲಾಯಿಸಿದ್ದು ಯಾಕೆ?ತೆಲಂಗಾಣದಲ್ಲಿ ಪೋಕ್ಸೋ ಆರೋಪಿಯಿಂದ ಮಾರಣಹೋಮ – ಪತ್ನಿ, ಮಕ್ಕಳು, ಸಂತ್ರಸ್ತೆ ಸೇರಿ 6 ಜನರ ಬರ್ಬರ ಹತ್ಯೆಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ – ಚಿಕ್ಕೋಡಿ ವ್ಯಾಪ್ತಿಯ 3 ಪ್ರಮುಖ ಸೇತುವೆಗಳು ಸಂಚಾರಕ್ಕೆ ಮುಕ್ತ