LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಧಾರವಾಡ ಕೃಷಿ ವಿವಿ ಗೋಧಿ‌ ಬೀಜ ಈಗ ಇಂಡೋನೇಷಿಯಾದಲ್ಲಿ ಬಿತ್ತನೆ

Advertisement
Advertisement

ಧಾರವಾಡ: ಇತ್ತೀಚೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ  ಬಾಹ್ಯಾಕಾಶಕ್ಕೆ ಮೆಂತೆ ಮತ್ತು ಹೆಸರು ಕಾಳುಗಳನ್ನ ತೆಗೆದುಕೊಂಡು ಹೋಗಿ ಪ್ರಯೋಗ ಮಾಡಲಾಗಿತ್ತು. ಈಗ ಇದೇ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಬಾರಿ ಮತ್ತೊಂದು ದೇಶಕ್ಕೆ ಗೋಧಿ ತಳಿಯ ಬೀಜ ಕಳಿಸಲಾಗುತ್ತಿದೆ.‌ ಇದಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ಆ ದೇಶದ ಜೊತೆ ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆ.

ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಷಿಯಾಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಹತ್ವದ ಒಪ್ಪಂದ ಮಾಡಿಕೊಂಡು ಬಂದಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ DWR-162 ಹೆಸರಿನ ಗೋಧಿ ತಳಿಯ 100 ಟನ್ ಬೀಜ ಇಂಡೊನೇಷಿಯಾಗೆ ಕೊಡುವ ಒಪ್ಪಂದ ಅದಾಗಿದೆ. 

ಏನಿದು DWR-162 ಗೋಧಿ ತಳಿ?
ಧಾರವಾಡ ಕೃಷಿ ವಿವಿ ಬಹಳ ವರ್ಷಗಳ ಹಿಂದೆ ಈ ಒಂದು ಗೋಧಿ ತಳಿಯನ್ನ ಕಂಡು ಹಿಡಿದಿತ್ತು. 1925ರಲ್ಲೇ ಇದರ ಸಂಶೋಧನೆ ಆರಂಭ ಮಾಡಿದ್ದರು. ನಂತರ 1993 ರಲ್ಲಿ ಸಂಶೋಧನೆ ಮುಗಿದು ಈ ಗೋಧಿ ತಳಿಗೆ DWR-162 ಎಂದು ಹೆಸರು ಕೊಡಲಾಯಿತು. ಈ‌ ಗೋಧಿ ಹೆಚ್ಚು ಪ್ರೋಟೀನ್ ಇರುವಂತದ್ದಾಗಿದೆ. ಅಲ್ಲದೇ ಹೆಚ್ಚು ಇಳುವರಿ ಕೊಡುವ ಗೋಧಿ ಇದಾಗಿದೆ. ಈ ಗೋದಿ ಕೇವಲ ಚಪಾತಿ ಮಾಡಲು ಅಷ್ಟೇ ಅಲ್ಲ, ಬ್ರೆಡ್ ಕೂಡಾ ಮಾಡಲು ಉತ್ತಮವಾಗಿದೆ.

ಈ ಗೋಧಿಯ ಇನ್ನೊಂದು ವಿಶೇಷತೆ ಏನೆಂದರೆ ಉಷ್ಣತೆ ಮತ್ತು ಬರ ಎರಡು ತಡೆದುಕೊಳ್ಳಬೇಕು. ಈ ಅ ರೀತಿಯ ಈ DWR-162 ಗೋಧಿ ತಳಿ‌ ಇದೆ. ಅಲ್ಲದೇ ಹೆಕ್ಟೇರ್‌ಗೆ 75 ಕ್ವಿಂಟಲ್ ಗೋಧಿ ಉತ್ಪಾದನೆ ಕೊಡಲಿದೆ. ಇದು ದೇಶದ ಹಲವು ಕಡೆ ಬೆಳೆದು ಪ್ರಯೋಗ ಮಾಡಲಾಗಿದೆ. ಉಷ್ಣ ಹೆಚ್ಚು ಇರುವ ಕಡೆ ಮತ್ತು ಕಡಿಮೆ ಇರುವ ಕಡೆ ಹೇಗೆ ಇಳುವರಿ‌ ಕೊಡಲಿದೆ ಎಂದು ಪ್ರಯೋಗ ಮಾಡಲಾಗಿದೆ. ಹೀಗಾಗಿ ಇದೇ ತಳಿಯ ಗೋಧಿ ಈಗ ಇಂಡೊನೇಷಿಯಾಗೆ ಕೊಡಲಾಗುತ್ತಿದೆ. ಅಲ್ಲಿ‌ಯ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳಲಿದೆ.

ದನಕ್ಕೆ ಇದರ ಹುಲ್ಲು ಹಾಕಬಹುದು. ಯಾಕಂದರೆ ಹೆಚ್ಚು ಪ್ರೋಟೀನ್ ಇರುವ ಗೋಧಿ‌‌ ಹುಲ್ಲಾಗಿದೆ. ಕೃಷಿ ವಿವಿಯಲ್ಲಿ ಇದನ್ನ ರೈತರ ಸಹಭಾಗಿತ್ವದಲ್ಲೇ‌ ಬೆಳೆದಿದೆ. ಈ‌ ಗೋಧಿ ಈಗ ಕೇವಲ ಭಾರತ ದೇಶದ ಆಹಾರ ಭದ್ರತೆ ಅಷ್ಟೇ ಅಲ್ಲ, ಇಂಡೊನೇಷಿಯಾದ ಆಹಾರ ಭದ್ರತೆ ಕುಡಾ ಆಗಲಿದೆ ಎಂದು ಕೃಷಿ ವಿಜ್ಞಾನಿ‌ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಅಷ್ಟೇ ಅಲ್ಲದೇ ವಿಶ್ವದಲ್ಲೇ‌ ಈಗ ಧಾರವಾಡ ಕೃಷಿ‌ ವಿವಿ ಹೆಸರು ಮಾಡುತ್ತಿದೆ.‌ ಹಲವು ವಿಜ್ಞಾನಿಗಳ ಶ್ರಮ ಈ ಸಂಶೋಧನೆಯ ಹಿಂದಿದೆ. ಈಗ ಪ್ರಧಾನಿ ಮೋದಿಯವರು ಇದರ ಒಪ್ಪಂದ ಮಾಡಿದ್ದಕ್ಕೆ ಕೃಷಿ ವಿವಿಗೆ ಒಂದು ದೊಡ್ಡ‌ ಕಿರಿಟ ಸಿಕ್ಕಂತೆ ಆಗಿದೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KPTCLನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಜಾಗತಿಕ ‘ಝೀರೋ ಟ್ರಸ್ಟ್’ ಸೈಬರ್ ಭದ್ರತಾ ವ್ಯವಸ್ಥೆ ಅಳವಡಿಕೆಕೇಂದ್ರ ಸಚಿವ ಹೆಚ್‌ಡಿಕೆ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಬಡ್ಡಿ ದಂಧೆಕೋರರ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ; ಸೆಲ್ಫಿ ವಿಡಿಯೋ, ಡೆತ್‌ನೋಟ್ ಪತ್ತೆಪತಿಗೆ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಆರೋಪ – ಬೇಸತ್ತು ಆತ್ಮಹತ್ಯೆಗೆ ಶರಣಾದ ಪತ್ನಿಮಗು ಬೇಡವೆಂದು 8 ತಿಂಗಳ ಗರ್ಭಿಣಿ ಪತ್ನಿಯ ಕುತ್ತಿಗೆ ಬಿಗಿದು ಕೊಲೆಗೆ ಯತ್ನ; ಪತಿ ಅಂದರ್‌ಬಾರ್ ಮೇಲೆಯೇ ಬಿಸಿಎಂ ಹಾಸ್ಟೆಲ್‌ – ಬೆಂಗಳೂರಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟಅಂಗಡಿ ದೋಚಿ ಮಾಲೀಕರಿಗೆ ವಿದ್ಯುತ್‌ ಶಾಕ್‌ ಹೊಡೆಸುವ ವಿಚಿತ್ರ ಕಳ್ಳ!ಮಣಿಪಾಲ್‌ ಬಳಿ ಕಂದಕಕ್ಕೆ ಉರುಳಿದ ಶಾಲಾ ಬಸ್ – ವಿದ್ಯಾರ್ಥಿ ತಲೆಗೆ ಗಂಭೀರ ಗಾಯರಾಮ ಮಂದಿರದ ಕಠಿಣ ನಿಯಮಕ್ಕೆ ಬೇಸತ್ತು ದೇಣಿಗೆ ಎಣಿಕೆ ಸಿಬ್ಬಂದಿಯ ಸಾಮೂಹಿಕ ರಾಜೀನಾಮೆಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ದುರಂತ – 14 ವರ್ಷದ ವಿದ್ಯಾರ್ಥಿನಿ ಸಾವು