spot_img
spot_img
spot_img
24.8 C
Belagavi
Thursday, June 1, 2023
spot_img

ಮರಾಠಾ ಮೀಸಲಾತಿ ಪ್ರತಿಭಟನೆಯಲ್ಲಿ ಅಬ್ಬರದ ಭಾಷಣ ಮಾಡಿದ ಶಾಸಕ ಬೆನಕೆ

ಬೆಳಗಾವಿ: ಮರಾಠಾ ಸಮುದಾಯದವರು ನಡೆಸುತ್ತಿರುವ 2 ಬಿ ಯಿಂದ 2ಎ ಹೋರಾಟದ ವೇದಿಕೆಯಲ್ಲಿ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಅಬ್ಬರ ಭಾಷಣ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸುವರ್ಣಸೌಧದ ಕೊಂಡಸಕೊಪ್ಪ ಬಳಿಯ ಪ್ರತಿಭಟನಾ ಸ್ಥಳದ ವೇದಿಕೆಯ ಮೇಲೆ ಶಾಸಕ ಅನಿಲ ಬೆನಕೆ ಭಾಷಣ ಮಾಡಿ, ಸುಡು ಬಿಸಲಲ್ಲೂ ಎಲ್ಲರೂ ಕುಳಿತಿದ್ದು, ನಿಮ್ಮ ದಿಟ್ಟ ನಿರ್ಧಾರ ಎಷ್ಟಿದೆ ಎಂದು ತಿಳಿಯುತ್ತದೆ.

ಮರಾಠ ಸಮುದಾಯ ಎಂದರೆ ಸಾಯುವರೆಗೆ ಯಾರಿಗೂ ಬಗ್ಗುದಿಲ್ಲವೊ ಅದು ಮರಾಠಾ ಸಮಾಜ, ದೇಶದಲ್ಲಿ ಆಂದೋಲನ ಆದಾಗ, ದೇಶದ ಮೇಲೆ ಆಕ್ರಮಣ ಆದಾಗ ಸಂಘರ್ಷ ಮಾಡಿದ್ದು ಮರಾಠಾ ಸಮುದಾಯ, ಯಾವುದೇ ಒಂದು ಉದ್ದೇಶ ಈಡೇರಿಕೆಗೆ ಮರಾಠ ಸಮಾಜ ನಿರ್ಧಾರ ತಗೆದುಕೊಂಡ್ರೆ ಉದ್ದೇಶ ಈಡೇರುವರೆಗೆ ಕೈ ಬಿಡುವುದಿಲ್ಲ ಎಂದು ತಿಳಿಸಿದರು.

ಇಂದು ನಾವು ಸುವರ್ಣ ಸೌಧದ ಮುಂದೆ ಮರಾಠಾ ಸಮುದಾಯಕ್ಕೆ 2ಬಿ ಯಿಂದ 2ಎ ಮಿಸಲಾತಿ ನೀಡಬೇಕು ಎಂದು ಸೇರಿದ್ದೇವೆ. ಈ ವೇಳೆ ನಮಗೆ ಬೆಂಬಲ ನೀಡುತ್ತಿರುವ ಶ್ರೀಮಂತ ಪಾಟೀಲ್, ಎಂಎಲ್ ಸಿ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ಅಭಯ ಪಾಟೀಲ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ತಿಳಿಸಿದರು.

ಕಳೆದ 15 ವರ್ಷದಿಂದ ಮರಾಠ ಸಮುದಾಯ ಪ್ರಮುಖ ನಾಲ್ಕು ಬೇಡಿಕೆಗಳನ್ನು ಇಟ್ಟಿದೆ, ಅದರಲ್ಲಿ 2ಬಿ ಯಿಂದ 2 ಎ ಮೀಸಲಾತಿ. ‌ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸರ್ಕಾರಿ ಜಯಂತಿ ಮಾಡಬೇಕು. ಮರಾಠಾ ನಿಗಮ ಸ್ಥಾಪನೆ ಹಾಗೂ ಮರಾಠಾ ಸಮುದಾಯದವರು ಹೆಚ್ಚನ ಸಂಖ್ಯೆಯಲ್ಲಿ ಶಾಸಕರು ಆಗಬೇಕು ಎಂಬುದು ಎಂದು ಕರೆ ನೀಡಿದರು.

Related News

ಶೆಟ್ಟರ್​, ಲಕ್ಷ್ಮಣ್ ಸವದಿ ನಮ್ಮ ನಾಯಕರು ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ

ಬೆಳಗಾವಿ: ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರ ಜೊತೆಗೆ ಇದ್ದೇವೆ, ಇಡೀ ಪಕ್ಷ ಅವರ ಜೊತೆ ಇದೆ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ ನಮ್ಮ ಪಕ್ಷದ ನಾಯಕರು ಎಂದು...

ರಾಜ್ಯದ ವಿವಿದೆಡೆ ಲೋಕಾಯುಕ್ತ ದಾಳಿ

ಬೆಂಗಳೂರು:  ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಮೇ 31) ಬೆಳ್ಳಂಬೆಳಗ್ಗೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ, ಮತ್ತೊಂದೆಡೆ ರಾಜ್ಯದ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನ ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ ತುಮಕೂರಿನ ಕೆಐಎಡಿಬಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -