ಬೆಳಗಾವಿ : ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಅವರು ಸಮಾಜ ಕಲ್ಯಾಣ ಇಲಾಖೆ ಡಾಕ್ಟರ್ ಬಾಬು ಜಗಜೀವನ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಅಡಿಯಲ್ಲಿ ಬರುವ ಚರ್ಮ ಕುಶಲಕರ್ಮಿಗಳ ಆಶಾಕಿರಣ ಲಿಡ್ಕರ್ ಶಾಪನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿನ ಚರ್ಮ ಉದ್ಯಮ ಬೆಳವಣಿಗೆ ಮತ್ತು ಪರಿಶಿಷ್ಟ ಜಾತಿಯ ಕುಶಲಕರ್ಮಿಗಳ ಅಭಿವೃದ್ಧಿ ಮೂಲ ಉದ್ದೇಶಗಳೊಂದಿಗೆ ಸರ್ಕಾರ ಸರ್ಕಾರವು 1976 ರಲ್ಲಿ ಡಾಕ್ಟರ್ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುತ್ತದೆ.
ರಾಜ್ಯ ಸರ್ಕಾರದ ದ್ಯೇಯೋದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ನಿಗಮವು ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
ಮುಂದುವರಿದು ಮಾತನಾಡಿ, ರಾಜ್ಯ ಸರ್ಕಾರವು ಪ್ರತಿ ವರ್ಷವೂ ಸಮಾಜ ಕಲ್ಯಾಣ ಇಲಾಖೆಯ ಆಯವ್ಯಯದಲ್ಲಿ ಅನುದಾನವನ್ನು ನಿಗದಿ ಪಡಿಸುತ್ತಿದೆ.
ಅನುದಾನಕ್ಕೆ ತಕ್ಕಂತೆ ಮತ್ತು ಚರ್ಮ ಕುಶಲಕರ್ಮಿಗಳ ಜನಸಂಖ್ಯೆ ಗನುಗುಣವಾಗಿ ಜಿಲ್ಲಾವಾರು ಗುರಿ ನಿಗದಿ ಪಡಿಸಲಾಗಿದೆ ಕೆಲವು ಮುಂದುವರಿದ ಯೋಜನೆಗಳೊಂದಿಗೆ ಹೊಸ ಯೋಜನೆಗಳನ್ನು ರೂಪಿಸಿ ಸಮರ್ಪಿಸಲಾಗಿದೆ
ಚರ್ಮ ಕುಶಲಕರ್ಮಿಗಳು ಈ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢ ಆಗಬೇಕೆಂದು ನಿಗಮವು ಆಶಿಸುತ್ತದೆ ಎಂದರು.