spot_img
spot_img
spot_img
24.8 C
Belagavi
Thursday, June 1, 2023
spot_img

ಮಹಾಲಕ್ಷ್ಮೀ ದೇವರ ಗದ್ದುಗೆ ಸ್ಥಳ ಸುನಿಶ್ಚಿತಗೊಳಸುವ ಗ್ರಾಮಸ್ಥರೊಂದಿಗೆ ಶಾಸಕ ಬೆನಕೆ ಚರ್ಚೆ 

ಬೆಳಗಾವಿ: ಜಾತ್ರಾ ಉತ್ಸವ ಕಮೀಟಿ ಹಾಗೂ ಬೆಳಗಾವಿ ದೇವಸ್ಥಾನ ಕಮೀಟಿ ಇವರೊಂದಿಗೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಬೆಳಗಾವಿಯ ಪುರಾತನ ಪರಂಪರೆ ಹಾಗೂ ಜನರ ಧಾರ್ಮಿಕ ಮನೋಭಾವನೆಗಳಿಗೆ ಅನುಗುಣವಾಗಿ ನಗರದ ಕೆಂದ್ರ ಬಸ ನಿಲ್ದಣದ ಹತ್ತಿರವಿರುವ ಬೆಳಗಾವಿ ಗ್ರಾಮದೇವತೆಯರಾದ ಶ್ರೀ. ಮಹಾಲಕ್ಷ್ಮೀ ದೇವತೆಯರ ಗದ್ದುಗೆ ಸ್ಥಾನಕ್ಕೆ 2 ಗುಂಟೆ ಸ್ಥಳವನ್ನು ಸುನಿಶ್ಚಿತಗೊಳಿಸಿದ್ದು, ಅದಕ್ಕೆ ಬೇಕಾಗುವ ಎಲ್ಲ ಪರ್ವ ತಯಾರಿಯನ್ನು ಸಂಬಂಧಿತ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಬರುವ ಜನವರಿ ತಿಂಗಳಲ್ಲಿ ಬೆಳಗಾವಿ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ಹಾಗೂ ಪಾಲಿಕೆ ಮೆರವಣ ಗೆ ನಡೆಯುತ್ತಿರುವುದರಿಂದ ಇಂದು ಈ ಸಭೆ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ಕ್ಯಾಂಟೋನ್ಮೆಂಡ ಬೋರ್ಡ (ದಂಡುಮಂಡಳಿ) ಬೆಂಗಳೂರು ವತಿಯಿಂದ ಯಾವುದೇ ರೀತಿಯ ಅನುಮತಿಯನ್ನು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅನಿಲ ಬೆನಕೆ ಅವರು ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸಂಜಯ ರಾಜಸ (ಕೆ.ಎಸ್.ಆರ್.ಟಿ.ಸಿ) ಗುತ್ತಿಗೆದಾರ ನವಲಗೊಂಡ, ರಂಜೀತ ಪಾಟೀಲ, ರಾಹುಲ ಮುಚ್ಚಂಡಿ, ರಾಜು ಹಲಗೇಕರ, ನಾಗೇಶ ಲಂಗರಖಂಡೆ, ಇಂದ್ರಜೀತ ಪಾಟೀಲ, ಡಿ.ಎಮ್.ಕಾಂಬಳೆ, ಸೋಮಣ್ಣ ಅಂಗಡಿ, ಎನ್.ಆರ್. ತಿಮ್ಮಾರೆಡಡ್ಡಿ, ದಿನೇಶ ಸರ್ ಹಾಗೂ ಇತರ ಜಾತ್ರಾ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.

 

Related News

ಶೆಟ್ಟರ್​, ಲಕ್ಷ್ಮಣ್ ಸವದಿ ನಮ್ಮ ನಾಯಕರು ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ

ಬೆಳಗಾವಿ: ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರ ಜೊತೆಗೆ ಇದ್ದೇವೆ, ಇಡೀ ಪಕ್ಷ ಅವರ ಜೊತೆ ಇದೆ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ ನಮ್ಮ ಪಕ್ಷದ ನಾಯಕರು ಎಂದು...

ರಾಜ್ಯದ ವಿವಿದೆಡೆ ಲೋಕಾಯುಕ್ತ ದಾಳಿ

ಬೆಂಗಳೂರು:  ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಮೇ 31) ಬೆಳ್ಳಂಬೆಳಗ್ಗೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ, ಮತ್ತೊಂದೆಡೆ ರಾಜ್ಯದ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನ ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ ತುಮಕೂರಿನ ಕೆಐಎಡಿಬಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -