ಬೆಂಗಳೂರು: ಜನವರಿಯಿಂದ ನೇಕಾರ ಸಮುದಾಯಕ್ಕೆ 2 ಲಕ್ಷದ ತನಕ ಬಡ್ಡಿ ರಹಿತ ಸಾಲ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಹಿತಿ ನೀಡಿದರು.
ನೇಕಾರ ಸಮುದಾಯದ ಜೊತೆಗೆ ಸಭೆ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ನೇಕಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ.
ಇದಲ್ಲದೇ ಪವರ್ ಲೂಮ್ ನಲ್ಲಿ ಕೆಲಸಮಾಡುವ ನೌಕರರಿಗೆ ನೆರವು, ಸಂಘಟಿತ ಕಾರ್ಮಿಕರರಿಗೆ ರಾಜ್ಯ ಸರ್ಕಾರದಿಂದ ನೆರವು ನೀಡುವ ಬಗ್ಗೆ ಮುಂದಿನ ಬಜೆಟ್ನಲ್ಲಿ ಮಂಡನೆ ಮಂಡನೆ ಮಾಡಲಾಗುವುದು ಅಂತ ತಿಳಿಸಿದರು.
ಇನ್ನು ವಿದ್ಯಾನಿಧಿ ಯೋಜನೆಯನ್ನು ನೇಕಾರರ ಮಕ್ಕಳಿಗೆ ಕೂಡ ವಿಸ್ತರಣೆ ಮಾಡಲಾಗುವುದು ಅಂತ ಹೇಳಿದರು. ಇನ್ನೂ ನೇಕಾರರ ಉತ್ಪಾದಿಸಿದ ಬಟ್ಟೆಗಳನ್ನು ನೇರವಾಗಿ ಅವರಿಂದಲೇ ಮಾಡುವ ಬಗ್ಗೆ ಕೂಡ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಅಂತ ತಿಳಿಸಿದರು.