Ad imageAd image

ಅಪೂರ್ವ ಸಹೋದರಿಯರ ಪ್ರೀತಿ -ವಾತ್ಸಲ್ಯಕ್ಕೆ ಸದಾ ಋಣಿ ಅಕ್ಕ ಹೇಳಿದಂತೆ ಜೀವನ ಪರ್ಯಂತ ನಡೆಯುತ್ತೇನೆ-ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ

ratnakar
ಅಪೂರ್ವ ಸಹೋದರಿಯರ ಪ್ರೀತಿ -ವಾತ್ಸಲ್ಯಕ್ಕೆ ಸದಾ ಋಣಿ ಅಕ್ಕ ಹೇಳಿದಂತೆ ಜೀವನ ಪರ್ಯಂತ ನಡೆಯುತ್ತೇನೆ-ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ
WhatsApp Group Join Now
Telegram Group Join Now

ಬೆಳಗಾವಿ: ರಕ್ಷಾ ಬಂಧನದ ವೇಳೆ ಸಂಭ್ರಮ ಹಂಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು, ರಕ್ಷಾ ಬಂಧನದಂದು ಅಕ್ಕ ರಾಕಿ ಕಟ್ಟಿ; ಶುಭ ಹಾರೈಸಿರುವುದರಿಂದ ತುಂಬಾ ಸಂತೋಷವಾಗುತ್ತಿದೆ. ಇದು ನನ್ನ ಸೌಭಾಗ್ಯ. ಇಂತಹ ಅಕ್ಕನನ್ನು ಪಡೆದಿರುವುದಕ್ಕೆ ಭಗವಂತನಲ್ಲಿ ಸದಾ ಚಿರ ಋಣಿಯಾಗಿರುತ್ತೇನೆ ಎಂದರು.

ಇಂದು ನಮ್ಮ ಸಹೋದರಿ, ಕ್ಷೇತ್ರದ ಜನಪ್ರಿಯ ಶಾಸಕರಾಗಿ, ನಮ್ಮ ರಾಜ್ಯದ ಸಚಿವರಾಗಿ, ಅದೇ ರೀತಿ ಕ್ಷೇತ್ರದ ಮಗಳಾಗಿ, ಜನರ ಸೇವೆ ಮಾಡುತ್ತಿರುವುದು ಬಹಳ ಖುಷಿ ತಂದಿದೆ. ಅವರು ನಡೆದು ಬಂದ ಹಾದಿಯನ್ನು ನೋಡಿದರೆ, ಬಹಳ ಹೆಮ್ಮೆ ಅನಿಸುತ್ತದೆ. ಅಕ್ಕನೇ ನಮ್ಮೆಗೆಲ್ಲ ಸ್ಫೂರ್ತಿ. ಅವರು ಹಾಕಿಕೊಟ್ಟ ದಾರಿಯಲ್ಲಿ ಸದಾ ಮುನ್ನೆಡೆಯುತ್ತೇನೆ ಎಂದು ಈ ವೇಳೆ ಅವರು ವಾಗ್ದಾನ ಮಾಡಿದರು.

ನಮ್ಮ ಕುಟುಂಬ ನಮಗೆ ಹೆಮ್ಮೆ ಅನಿಸುತ್ತದೆ. ನನಗೆ ಐವರು ಸಹೋದರಿಯರು, ನಾನು ಆರನೇಯವನು; ಇಂತಹ ಅಪೂರ್ವ ಸಹೋದರಿಯರ ಪ್ರೀತಿ, ವಾತ್ಸಲ್ಯ ಪಡೆದಿರುವುದೇ ನನಗೆ ಪುಣ್ಯ. ನಾವೆಂದೂ ಇಂತಹ ದಿನಗಳು ಬರುತ್ತವೆಂದು ಕನಸು ಕಂಡವರಲ್ಲ; ದೇವರ ಆಶೀರ್ವಾದ, ಸುಮಾರು 25 ವರ್ಷಗಳಿಂದ ಅಕ್ಕ ಪಟ್ಟವಂತಹ ಕಷ್ಟ ಅಷ್ಟಿಷ್ಟಲ್ಲ. ರಾಜಕೀಯ ಸಂಘರ್ಷ, ಛಲದ ಹೋರಾಟದಿಂದಲೇ ಸಾಧನೆ ಮಾಡಿದಂತಹ ಗಟ್ಟಿಗಿತ್ತಿ. ಅವರನ್ನು ನೋಡಿದರೆ ನಮಗೆಲ್ಲ ಹೆಮ್ಮೆ. ಇಡೀ ರಾಜ್ಯದ ಎಲ್ಲ ಮಹಿಳೆಯರಿಗೂ ದೊಡ್ಡ ಸ್ಫೂರ್ತಿ. ಜೀವನಪರ್ಯಂತ ಅವರು ಹಾಕಿಕೊಟ್ಟ ಮಾರ್ಗದಲ್ಲಿ; ಅವರು ಹೇಳಿದಂತೆ ನಡೆಯುತ್ತೇನೆಂದು ಹೇಳಿದರು.

WhatsApp Group Join Now
Telegram Group Join Now
Share This Article