ಬೆಳಗಾವಿ : 2022-23ನೇ ಸಾಲಿನ ಬೆಳಗಾವಿ ತಾಲೂಕ ಆದರ್ಶ ಶಿಕ್ಷಕಿಯಾಗಿ ಶ್ರೀಮತಿ ಹೇಮಾವತಿ ಐ.ಬಿ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಗಡಿ ಗ್ರಾಮ ಕನ್ನಡ ಶಾಲೆ ಶಿಕ್ಷಕಿ ಹೇಮಾವತಿ ಐ.ಬಿ ಅವರನ್ನು ಕನ್ನಡ ಮರಾಠಿ ಗಡಿಭಾಗದ ಕನ್ನಡ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಉಪಾಧ್ಯಯರಾದ ರೇಣುಕಾ. ಅಳ್ಳಾವರ ಹಾಗೂ ಶಿಕ್ಷಕ ವೃಂದ ಶಾಲೆಯ ವತಿಯಿಂದ ಸನ್ಮಾನಿಸಿದರು.
ಈ ವೇಳೆ ಸುನಂದ ಹಿರೇಮಠ ಮಾತನಾಡಿ, ಶಾಲೆಯ ಮತ್ತು ನಮ್ಮ ಗ್ರಾಮದ ಗೌರವ ತರುವ ಸಂದರ್ಭವಾಗಿದೆ. ಅದಕ್ಕೆ ನಾನು ಶ್ರೀಮತಿ ಹೇಮಾವತಿ ಅವರಿಗೆ ನಾನು ಅಭಿನಂದರಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮರಾಠಿ ಮಾದರಿ ಶಾಲೆ ಎಲ್ಲೂರು ಎನ್. ಜಿ .ಎಚ್. ಎಮ್ . ಮುಖ್ಯ ಉಪಾಧ್ಯಯರಾದ ಮೋಹನ್ ಪಾಟೀಲ್ ಹಾಗೂ ಅವರ ಸಿಬ್ಬಂದಿ ವರ್ಗ ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾರ್ಥಿಗಳು, ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಆದರ್ಶ ಶಿಕ್ಷಕರಿಗೆ ಗೌರವ ಸನ್ಮಾನ ಮಾಡಲಾಯಿತು