ಬೆಳಗಾವಿ: ಕೃಷಿ ಹಾಗೂ ಸ್ವ ಉದ್ಯೋಗ ಫಲಾನುಭವಿಗಳಿಗೆ ಅನುದಾನ ವಿತರಣೆ ಕಾರ್ಯಕ್ರಮವನ್ನು ಬೆಳಗಾವಿ ಸಂಸದರಾದ ಮಂಗಲ ಅಂಗಡಿಯವರು ಉದ್ಘಾಟಿಸಿ 38 ಜನ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಕಛೇರಿಯ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದರು ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವು ಜನಪರ ಕಾರ್ಯಕ್ರಮದ ಮೂಲಕ ಜನಸಾಮಾನ್ಯರಿಗೆ ಆರ್ಥಿಕ ಸಹಕಾರ ನೀಡುತ್ತ ಬಂದಿದೆ. ಅನುದಾನ ವಿತರಣೆಯಂತಹ ಕಾರ್ಯಕ್ಮವು ಸಣ್ಣ ಪ್ರಮಾಣದಲ್ಲಿ ಹೊಸ ಕೃಷಿ ಮತ್ತು ಸ್ವ ಉದ್ಯೋಗ ಮಾಡುವಂತವರಿಗೆ ಪ್ರೇರಣೆ ನೀಡಿದಂತಾಗುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಳಗಾವಿ ನಿರ್ದೇಶಕರಾದ ಪ್ರದೀಪ ಶೆಟ್ಟಿ ಇವರು ಮಾತನಾಡಿ ಯೋಜನೆಯಿಂದ ಈ ದಿನ 153250/- ರೂ ಕೃಷಿ ಹಾಗೂ ಸ್ವ ಉದ್ಯೋಗ ಫಲಾನುಭವಿಗಳಿಗೆ ಅನುದಾನ ವಿತರಿಸಲಾಗುತ್ತಿದೆ. ಸ್ವ ಸಹಾಯ ಸಂಘದ ಮೂಲಕ ಪ್ರಸ್ತುತ ಆರ್ಥಿಕ ವರ್ಷದಲ್ಲಿ 500 ಕೋಟಿ ಪ್ರಗತಿನಿಧಿಯನ್ನು ಸದಸ್ಯರ ಕೃಷಿ, ಸ್ವ ಉದ್ಯೋಗ, ಹೈನುಗಾರಿಕೆ, ಕೃಷಿ ಯಂತ್ರೋಪಕರಣ ಖರೀದಿ ಮುಂತಾದ ಅಭಿವೃದ್ದಿ ಕೆಲಸಗಳಿಗೆ ನೀಡಲಾಗಿದೆ.
ಸಮಾಜದಲ್ಲಿ ಯಾರು ನಿರ್ಗತಿಕರಿದ್ದಾರೋ ಅಂತವರಿಗೆ ಮಾಶಾಸನ ವಿತರಿಸುವ ಕೆಲಸ ಮಾಡಲಾಗುತ್ತಿದೆ. ಸಮುಧಾಯ ಅಭಿವೃದ್ದಿ ಕೆಲಸಗಳಾದ ದೇವಸ್ಥಾನ ಜೀರ್ಣೋದ್ದಾರ ಶಾಲೆಗಳಿಗೆ ಡೆಸ್ಕ ಬೇಂಚ್ ವಿತರಣೆ, ಶಾಲೆಗಳಿಗೆ ಶಿಕ್ಷಕರ ಒದಗಣೆ ಕೆಲಸ ಮಾಡಲಾಗುತ್ತಿದೆ ಎಂದು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಕಾರ್ಯಕ್ರಮವು ಒಂದು ಮಾದರಿಯಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ ಇವರು ಮಾತನಾಡಿದರು. ನಜಾಗೃತಿ ವೇದಿಕೆ ಸದಸ್ಯರಾದ ರಾಜು ಮಿರಜನ್ನವರ ಉಪಸ್ಥಿತರಿದ್ದರು.
ಯೋಜನಾಧಿಕಾರಿಯವರಾದ ಮಂಜುನಾಥ ಎನ್ ಆರ್ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕರಾದ ಮಂಜುನಾಥ ಗೌಡಾ ನಿರೂಪಿಸಿದರು.