ಬೆಳಗಾವಿ: ಇಂದಿನಿಂದ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಇಂದೇ ಎಂಇಎಸ್ ಮಹಾಮೇಳ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಂದಾಗಿದೆ. ಬೆಳಗ್ಗೆ ವ್ಯಾಕ್ಸಿನ್ ಡಿಪೋಗೆ ಆಗಮಿಸುವಂತೆ ಎಂಇಎಸ್ ಮುಖಂಡರು ಕರೆ ನೀಡಿದ್ದರು. ಆದರೆ ಇದಕ್ಕೆ ಪೊಲೀಸರು ಎಂಇಎಸ್ ಮಹಾ ಮೇಳಾವ್ ಗೆ ತಡೆ ಹಿಡಿದಿದ್ದಾರೆ.
2006 ರಿಂದ 2021 ವರೆಗೂ ಮಹಾ ಮೇಳಾವ್ ಮಾಡುತ್ತಿದ್ದರು. ಹೀಗಾಗಿ ಈ ಬಾರಿ ಕೂಡ ಎಂಇಎಸ್ ಅವರು ಮಹಾ ಮೇಳಾವ್ ನಡೆಸಿಕೊಂಡು ಬರುತ್ತಿದ್ದರು. ಇದೀಗ ಪೊಲೀಸ್ ಇಲಾಖೆ ಮಹಾ ಮೇಳಾವ್ ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಎಲ್ಲೂ ಕೂಡ ಸಭೆ ಸೇರದಂತೆ ಎಂಇಎಸ್ ಪುಂಡಾರಿಗೆ ವಾರ್ನಿಂಗ್ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಮಹಾ ಮೇಳಾವ್ ಗೆ ಬ್ರೇಕ್ ಹಾಕಲಾಗಿದೆ.ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.