spot_img
spot_img
spot_img
spot_img
spot_img
spot_img
spot_img
spot_img
23.1 C
Belagavi
Thursday, September 28, 2023
spot_img

ಬಿ ಕೆ ಕಂಗ್ರಾಳಿ ಗ್ರಾಮ ಅವಿನಾಶ್ ರಾಮ ಭಾವು ಪೋತದಾರ ಪ್ಯಾನಲ್ ಬೆಂಬಲ ಘೋಷಣೆ

ಮಾರ್ಕಂಡಯ್ಯ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯ ಅಂಗವಾಗಿ ಇಂದು ಬಿ ಕೆ ಕಂಗ್ರಾಳಿ ಗ್ರಾಮದಲ್ಲಿ ಅವಿನಾಶ್ ರಾಮ ಭಾವು ಪೋತದಾರ್ ಅವರ ಪ್ಯಾನೆಲ್ ವತಿಯಿಂದ ಗ್ರಾಮದ ಕಲ್ಮೇಶ್ವರ ಮಂದಿರದಲ್ಲಿ ಪೂಜೆ ಸಲಿಸಿ ಪ್ರಚಾರ ಕಾರ್ಯಕ್ರಮ ಪ್ರಾರಂಭಿಸಿದರು.


ಅವಿನಾಶ್ ಪುಂತದಾರ ಮಾತನಾಡುತ್ತಾ ಕಳೆದ ಮೂರು ವರ್ಷಗಳಿಂದ ಮಾರ್ಖಂಡಯ್ಯ ಸಕ್ಕರೆ ಕಾರ್ಖಾನೆಯನ್ನು ನಡೆಸುತ್ತಾ ಇದ್ದೇವೆ ಸಾಲ ಸೂಲಾ ಮಾಡಿ ಕಾರ್ಖಾನೆ ಒಂದು ಒಳ್ಳೆಯ ರೀತಿಯಲ್ಲಿ ನಡೆಸುತ್ತಾ ಬಂದಿದ್ದೇವೆ. ಇನ್ನು ಮುಂದೆ ಸಕ್ಕರೆ ಕಾರ್ಖಾನೆಯನ್ನು ನಡೆಸಲು ಹಣದ ಅವಶ್ಯಕತೆ ಇದೆ. ಅದನ್ನು ಹೊಂದಿಸಲು ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ, ಈಗ ಇರುವ ಕಾರ್ಖಾನೆ ಜಮೀನು ಅರಣ್ಯ ಇಲಾಖೆಯಿಂದ 11 ಲಕ್ಷ ರೂಪಾಯಿ ನೀಡಿ
30 ವರ್ಷಗಳವರೆಗೆ ಲೀಜ್ ಮೇಲೆ ಪಡೆದುಕೊಂಡಿದ್ದೇವೆ ಅದರ ಜೊತೆಗೆ ನೀರಾವರಿಗಾಗಿ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ನೀರಾವರಿ ಇಲಾಖೆಗೆ ನೀಡಿದ್ದೇವೆ ಎಂದರು.


ಅರಣ್ಯ ಜಮೀನನ್ನು ಖರೀದಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆ ಪತ್ರ ವ್ಯವಹಾರ ನಡೆಯುತ್ತಿದೆ,
ನನ್ನ ಅಧ್ಯಕ್ಷ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಒಳ್ಳೆ ರೀತಿಯಿಂದ ನಡೆದುಕೊಂಡು ಬಂದಿದೆ. ಈಗ ಆಡಳಿತ ಮಂಡಳಿಯ ಚುನಾವಣೆ ಎದುರಿಸುತ್ತಿದ್ದೇವೆ ನಮ್ಮ ಪ್ಯಾನಲ್ 15 ಜನರನ್ನು ಸಂಪೂರ್ಣ ಬಹುಮತದಿಂದ ಆರಿಸಿ ಕಳಿಸಬೇಕೆಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.


ಈ ಸಂದರ್ಭದಲ್ಲಿ ಮನೋಹರ ಹುಕ್ಕೇರಿಕರ್, ಅಶೋಕ್ ನಾಯಕ್, ಅನಿಲ್ ಪಾವಶೆ, ಚೇತಕ್ ಕಾಂಬಳೆ ,ನೀಲಿಮಾ ಪಾವಶೆ ,ಮಸುದಾ ವಸಂತ್ ಮ್ಹಾಳೋಜಿ ,ಪ್ರದೀಪ್ ಅಷ್ಟೇ ಕರ, ಸೈಯದ್, ದತ್ತ ಪಾಟೀಲ್, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Related News

ಬೆಳಗಾವಿಯಲ್ಲಿ ಅದ್ದೂರಿ ಗಣೇಶ ವಿಸರ್ಜನೆ

ಬೆಳಗಾವಿ: 10 ದಿನಗಳ ಗಣಪತಿ ಭಕ್ತರ ಆತಿತ್ಯವನ್ನು ಸ್ವೀಕರಿಸಿ ಇಂದು ನಿರ್ಗಮನ ವಾಗುತ್ತಿದ್ದಾನೆ. ಗಣಪತಿ ಭಕ್ತರು ಹತ್ತು ದಿನಗಳವರೆಗೆ ವಿವಿಧ ಸೇವೆ ಸಲ್ಲಿಸಿ ಗಣಪತಿಯ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ. ಬೆಳಗಾವಿ ನಗರಕ್ಕೆ ಗಣಪತಿ ಆಗಮನ...

ಹಾಕಿ ಆಸ್ಟ್ರೋಟರ್ಫ್ ಮೈದಾನಕ್ಕೆ ಬೇಡಿಕೆ ಜನತಾ ದರ್ಶನದಲ್ಲಿ ಹೇಳಿಕೆ: ಭರವಸೆ

ಬೆಳಗಾವಿ: ಭಾರತಕ್ಕೆ ನಾಲ್ವರು ಒಲಂಪಿಕ್ ಹಾಕಿ ಆಟಗಾರರನ್ನು ನೀಡಿದ್ದು, ಕರ್ನಾಟಕ ಸರಕಾರ ಬೆಳಗಾವಿಗೆ ಅಂತರಾಷ್ಟ್ರೀಯ ಗುಣಮಟ್ಟದ ಹಾಕಿ ಮೈದಾನವನ್ನು ಇನ್ನೂ ನೀಡಿಲ್ಲ, ಅದಕ್ಕಾಗಿ ಜಿಲ್ಲಾಡಳಿತ ಕೂಡಲೇ ಬೆಳಗಾವಿ ಹಾಕಿ ಸಂಸ್ಥೆಯ ಆಸ್ಟ್ರೋಟರ್ಫ್ ಮೈದಾನದ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -