ವರದಿ : ರತ್ನಾಕರ ಗೌಂಡಿ, ಬೆಳಗಾವಿ
ಬೆಳಗಾವಿ : ಚುನಾವಣೆ ಹತ್ತಿರ ಇರುವುದರಿಂದ ಸಹಜವಾಗಿ ಬಿಜೆಪಿಯವರಿಗೆ ನಮ್ಮ ಭಯ ಕಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಹೇಳಲು ಬೇರೆ ವಿಷಯವಿಲ್ಲ ಆದ್ದರಿಂದ ಚುನಾವಣೆ ಹತ್ತಿರ ಇರುವುದರಿಂದ ಸಹಜವಾಗಿ ನಮ್ಮ ಭಯ ಕಾಡುತ್ತಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ವೇಳೆ ರಮೇಶ್ ಜಾರಕಿಹೊಳಿಯವರು ಮಂತ್ರಿ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆರು ತಿಂಗಳು ಒಮ್ಮೆ ರಮೇಶ್ ಜಾರಕಿಹೊಳಿ ಅವರಿಗೆ ಲಾಲಿಪಾಪ್ ನೀಡಿ ಸಮಾಧಾನ ಪಡಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಭಾರತ್ ಜೋಡೋ ಯಾತ್ರೆ ಬೆಳಗಾವಿ ಜಿಲ್ಲೆಯ ನಾಯಕರುಗಳಿಗೆ ಕೆಲವೊಂದು ಜವಾಬ್ದಾರಿಗಳನ್ನು ಕೊಟ್ಟಿದ್ದಾರೆ. ಆ ಜವಾಬ್ದಾರಿಯಂತೆ ಪ್ರತಿಯೊಬ್ಬ ನಾಯಕರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗಾವಿಯಿಂದ ಈಗಾಗಲೇ ಹಲವಾರು ನಾಯಕರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಸಾಥ್ ನೀಡುತ್ತಿದ್ದಾರೆ, ನಾವು ಕೂಡ ನಾಳಿದ್ದು ನಾಡಿದ್ದು ಯಾತ್ರೆಯಲ್ಲಿ ಭಾಗವಹಿಸಲು ಸಿದ್ದರಾಗಿದ್ದೇವೆ ಎಂದರು.
ST ಮೀಸಲಾತಿ ವಿಷಯದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಸಿ, ಮೀಸಲಾತಿ ಯಾವ ಹಂತದಲ್ಲಿ ನಡೆಯಲಿದೆ ಎನ್ನುವುದು ಒಂದು ಮಹತ್ವದ ವಿಷಯವಾಗಿದೆ. ಆದರೆ ಬಿಜೆಪಿ ಸರ್ಕಾರ ಇದನ್ನು ಮಾಡಬಹುದು ಎಂಬ ವಿಶ್ವಾಸ ನನಗಿಲ್ಲ ಎಂದರು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖಂಡರಗಳ ಸಭೆ ಕರೆದಿದ್ದು ಅದರಲ್ಲಿ ನಾನು ಭಾಗವಹಿಸಲಿದ್ದಾರೆ. ಮತ್ತು ಮುಖ್ಯಮಂತ್ರಿಗಳು ಅಕ್ಟೋಬರ್ 7 ರಂದು ಸರ್ವ ಪಕ್ಷಗಳ ಸಭೆ ಕರೆದಿದ್ದು ಅದರಲ್ಲಿ ಕಾಂಗ್ರೆಸ್ಸಿನ ಪ್ರಮುಖ ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.
2023ರ ಚುನಾವಣೆ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬೆಳಗಾವಿ ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ಚುನಾವಣೆ ಹೋಗಲಿದೆ ಎಂದು ರಾಜ್ಯಾಧ್ಯಕ್ಷರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಸಂಘಟನೆ ಮಾಡಿರುವಂತ ಪಕ್ಷವನ್ನು ಬೆಳೆಸಿರುವಂತ ಯಡಿಯೂರಪ್ಪ ಅಂತ ನಾಯಕರಗಳೇ ಕಡೆಗಣಿಸಿರುವಾಗ ರಮೇಶ್ ಜಾರಕಿಹೊಳಿ ಅವರ ಮಹತ್ವವನ್ನು ನೀವೇ ವಿಶ್ಲೇಷಿಸಿ ಎಂದು ನಗೆ ಚಟಾಕಿ ಹಾರಿಸಿದ್ದರು.
ಆರ್ ಎಸ್ ಎಸ್ ಕೆಲ ಮುಖಂಡರುಗಳು ತಮ್ಮಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಟೀಕಿಸಲು ಪ್ರಾರಂಭಿಸಿದ್ದಾರೆ ಈ ಪ್ರಶ್ನೆಗೆ ಉತ್ತರ ಆರ್ ಎಸ್ ಎಸ್ ರವರು ಕೆಳಮಟ್ಟದಿಂದ ಪಕ್ಷಗಳನ್ನು ಸಂಘಟಿಸಿ ಅಧಿಕಾರಕ್ಕೆ ತಂದಿದ್ದು ಅವರ ಆಸೆಗಳು ಈಡೇರುತ್ತ ಇಲ್ಲ, ಕಾರಣ ಸರ್ಕಾರದ ವಿಫಲತೆಗಳ ಕುರಿತು ಬಹಿರಂಗವಾಗಿ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈಗಾಗಲೇ ಇದನ್ನು ಹಲವಾರು ಬಾರಿ ಜನಗಳಿಗೆ ಸತ್ಯಾಂಶಗಳನ್ನು ತಿಳಿಸಿದೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗದಿಗೆ ಏರುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಂಭ್ರಮ ಆಚರಣೆ ಕಾಣಿಸಿ ಸಿಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪ, ಈ ಸಂದರ್ಭದಲ್ಲಿ ಇನ್ನು ಪಕ್ಷದ ಅಧ್ಯಕ್ಷರ ಚುನಾವಣೆ ಮುಕ್ತಾಯಗೊಂಡಿಲ್ಲ ಕೆಲವೊಂದು ಫಾರ್ಮಾಲಿಟಿಗಳ ಪೂರ್ಣವಾದ ನಂತರ ಸಂಭ್ರಮಾಚರಣೆ ಆಗಲಿದೆ.
ಈ ಚುನಾವಣೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೋಗಲಿದ್ದೇವೆ ಮುಂದೆ ಬರು ದಿನಗಳಲ್ಲಿ ಖಂಡಿತ ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಅಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಕಾಂಗ್ರೆಸ್ ಪಕ್ಷದ ಗ್ರಾಮೀಣ ಅಧ್ಯಕ್ಷರಾದ ವಿನಯ ನವಲಗಟ್ಟಿ ಉಪಸ್ಥಿತರಿದ್ದರು.