ಬೆಳಗಾವಿ :20 ದಿನಗಳ ಹಿಂದೆ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿತ್ತು. ಅದನ್ನು ಅರಣ್ಯ ಇಲಾಖೆಯವರು ಇದುವರೆಗೆ ಸೆರೆ ಹಿಡಿದಿಲ್ಲ.
ಹೀಗಾಗಿ ಬೆಳಗಾವಿಯ ಜನ ಅದಕ್ಕೊಂದು ಆಧಾರ್ ಕಾರ್ಡ್ ಸೃಷ್ಟಿಸಿ, ನಾ ಬೆಳಗಾವಿ ಬಿಟ್ಟು ಹೋಗಲಾರೆ, ವಿನಾಯಕ ಚತುರ್ಥಿ ಮುಗಿಸಿಕೊಂಡು ಹೋಗ್ತೇನೆ ಅಂತ ಶೀರ್ಷಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.