ಬೆಳಗಾವಿ: ಬಿಜೆಪಿಯಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಡಿ.ಕೆ ಶಿವಕುಮಾರ್ ಶಿಕ್ಷಣ ಸಂಸ್ಥೆಯ ಮೇಲೆ ಸಿಬಿಐ ದಾಳಿ ನಡೆಸಿಲ್ಲ. ಬದಲಾಗಿ ಇದು ಕೆಲವೊಮ್ಮೆ ರೊಟೀನ್ ನಡೆಯುತ್ತದೆ ಎಂಬುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಡಿ ಕೆ ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ಸಿಬಿಐ ದಾಳಿ ವಿಚಾರವಾಗಿ ಮಾತನಾಡಿ, ಬಿಜೆಪಿ ಅಧಿಕಾರ ದುರ್ಬಳಕೆ ಆ ರೀತಿಯಲ್ಲಿ ಇಲ್ಲ. ಸಿಬಿಐ ದಾಳಿ ಕೆಲವೊಮ್ಮೆ ರೊಟೀನ್ ನಡೆಯುತ್ತದೆ. ಕಾನೂನು ಹೋರಾಟ ನಡೆಯುತ್ತದೆ. ಅವರಿಗೆ ಒಳ್ಳೆಯದಾಗಲಿ ಎಂದರು.
ಇನ್ನು ರಮೇಶ್ ಜಾರಕಿಹೊಳಿ ಸಭೆಗೆ ಬರ್ತಿಲ್ಲ, ಬಿಜೆಪಿಯಲ್ಲೂ ಕಾಣಿಸಿಕೊಳ್ಳದ ವಿಚಾರವಾಗಿ ಮಾತನಾಡಿ, ಹಾಗೇನಿಲ್ಲ ಮಹೇಶ್ ಕುಮಟ್ಟಳ್ಳಿ ಮಗಳ ಮದುವೆ ಇತ್ತು. ರಮೇಶ್ ಅಲ್ಲಿ ಹೋಗಿದ್ದಾರೆ. ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ನಾಳೆಯಿಂದ ಸಭೆಗೆ ಬರಲಿದ್ದಾರೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡೋ ವಿಚಾರವಾಗಿ ಮಾತನಾಡಿ , ಅದು ಸಿಎಂ ಮತ್ತು ಹೈಕಮಾಂಡ್ಗೆ ಬಿಟ್ಟ ವಿಚಾರವಾಗಿದೆ. ಅದನ್ನ ರಮೇಶ್, ನಾವು ಒಪ್ಪುತ್ತೇವೆ. ಅಧಿವೇಶನಕ್ಕೆ ನಾಳೆ ಬರಬಹುದು, ಬೆಳಗಾವಿಯಲ್ಲಿ ರಮೇಶ್ ಉತ್ತಮ ಕೆಲಸ ಮಾಡ್ತಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿಗೆ ಹೆಚ್ಚು ಶಕ್ತಿ ಇದೆ. ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.