Ad imageAd image

ನದಿಯಲ್ಲಿ‌ ಮುಳುಗಿ ವ್ಯಕ್ತಿ ಸಾವು

ratnakar
ನದಿಯಲ್ಲಿ‌ ಮುಳುಗಿ ವ್ಯಕ್ತಿ ಸಾವು
WhatsApp Group Join Now
Telegram Group Join Now

ಕಲಬುರಗಿ: ಸ್ನೇಹಿತನನ್ನು ಉಳಿಸಲು ಹೋಗಿ ಭೀಮಾ ನದಿಯಲ್ಲಿ ಮುಳುಗಿ ವ್ಯಕ್ತಿ ಮೃತಪಟ್ಟಿರುವ ಘಟನೆ ಅಫಜಲಪುರ್ ತಾಲೂಕಿನ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ. ಶಶಿಕಾಂತ್ (42) ಮೃತ ದುರ್ದೈವಿ.

ಶಶಿಕಾಂತ್ ಸ್ನೇಹಿತರ ಜೊತೆ ಭೀಮಾ‌ ನದಿ ತೀರಕ್ಕೆ ಹೋಗಿದ್ದನು. ಈ ವೇಳೆ ಆತನ ಸ್ನೇಹಿತ ಕಾಲು ಜಾರಿ ಭೀಮಾ‌ ನದಿಯಲ್ಲಿ ಬಿದ್ದಿದ್ದಾನೆ. ಈ ವೇಳೆ ಸ್ಥಳೀಯರು ಶಶಿಕಾಂತ್ ಸ್ನೇಹಿತನನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಸ್ನೇಹಿತನನ್ನು ಕಾಪಾಡಲು ಹೋಗಿ ಶಶಿಕಾಂತ್ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article