ಧಾರವಾಡ: ಆಯತಪ್ಪಿ ಬಾವಿಯಲ್ಲಿ ಬಿದ್ದು ಅರಣ್ಯಾಧಿಕಾರಿ ಅಜೀತ್ ಶಾನಬಾಗ್ ಅವರು ತಮ್ಮ ಸ್ವಗೃಹದಲ್ಲಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ನಗರದ ಶ್ರೀಪಾದ ನಗರದಲ್ಲಿರುವ ಅವರ ಮನೆಯ ಅಂಗಳದ ಭಾವಿಯ ಸುತ್ತ ಬೆಳೆದಿರುವ ಕಸ ಸ್ವಚ್ಛಗೊಳಿಸುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ. ಹೊಸಾಯಲ್ಲಾಪುರದ ರುದ್ರ ಭೂಮಿಯಲ್ಲಿ ಬ್ರಾಹ್ಮಣರ ವಿಧಿ ವಿಧಾನ ಪ್ರಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.